Site icon Suddi Belthangady

ನಾವರ: ಗೋಳಿಕಟ್ಟೆ 21ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ರತ್ನಾಕರ ಹೆಚ್

ನಾವರ: ಗೋಳಿಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸೆ.29ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

21ನೇ ವರ್ಷದ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಕುಲಾಲ್ ದೇವರಗುಡ್ಡೆ ಮತ್ತು ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಹಿಮರಡ್ಡ ಕುದ್ಯಾಡಿ ಇವರನ್ನು ಆಯ್ಕೆ ಮಾಡಲಾಗಿದೆ.

2024ರ ಶಾರಾದ ಪೂಜಾ ಮಹೋತ್ಸವ ಅ.9ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಒಂದೇ ದಿನ ಪೂಜಾ ಕೆಲಸಕಾರ್ಯ ನಡೆಯಲಿದೆ.ಸಂಜೆ ಅಳದಂಗಡಿ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಫಲ್ಗುಣಿ ನದಿಯಲ್ಲಿ ಶಾರದಾ ದೇವಿ‌ ಮಣ್ಣಿನ ‌ಮೂರ್ತಿಯ ವಿಸರ್ಜನೆ ನಡೆಯಲಿರುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ್ರಧಾನ ಸಂಚಾಲಕರಾದ ವಿಜಯ ಕುಮಾರ್ ಜೈನ್, ಸಂಚಾಲಕರಾದ ರಾಜೂ ಸಾಲ್ಯಾನ್, ವೀರೇಂದ್ರ ಕುಮಾರ್ ರಾಜಪಾದೆ, ರವಿ ಪೂಜಾರಿ ಹಾರಡ್ಡೆ, ನಿತ್ಯಾನಂದ ಯೋಗ ಕ್ಷೇಮ ನಾವರ, ಸದಾನಂದ ಬಿ.ಕುದ್ಯಾಡಿ ಮುಂತಾದವರು ಉಪಸ್ಥಿತರಿದ್ದರು.

Exit mobile version