Site icon Suddi Belthangady

ಮಂಜುಶ್ರೀ ಸೀನಿಯರ್ ಚೇಂಬರ್‌ನ ಪೂರ್ವಾಧ್ಯಕ್ಷ ಪ್ರಥ್ವಿರಂಜನ್ ರಾವ್‌ಗೆ ನುಡಿನಮನ

ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಚೇಂಬರ್‌ನ ಪೂರ್ವಾಧ್ಯಕ್ಷ, ಉದ್ಯಮಿ, ಮೈತ್ರಿ ಎಂಟರ್ ಪ್ರೈಸಸ್ ಶಾಮಿಯಾನ ಸಂಸ್ಥೆಯ ಮಾಲಕ ಪ್ರಥ್ವಿರಂಜನ್ ರಾವ್ ಸೆ.24ರಂದು ನಿಧನರಾದರು. ಅವರಿಗೆ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ನುಡಿನಮನ ಕಾರ್ಯಕ್ರಮವು ಸೆ.28ರಂದು ಬೆಳ್ತಂಗಡಿಯ ಪ್ರಥ್ವಿ ಮಹಲ್ ಸಭಾಂಗಣದಲ್ಲಿ ಸೀನಿಯರ್ ಚೇಂಬರ್ ಅಧ್ಯಕ್ಷರಾದ ವಾಲ್ಟರ್ ಸಿಕ್ವೇರಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸೀನಿಯರ್ ಚೇಂಬರ್‌ನ ಸ್ಥಾಪಕಾಧ್ಯಕ್ಷ ಪ್ರಮೊದ್ ಆರ್.ನಾಯಕ್, ನಿಕಟ ಪೂರ್ವಧ್ಯಕ್ಷ ಲ್ಯಾನ್ಸಿ ಎ ಪಿರೇರಾ ಮತ್ತು ನಿವೃತ್ತ ಶಿಕ್ಷಕ ಜೋಯ್‌ರವರು ದಿ. ಪ್ರಥ್ವಿ ರಂಜನ್‌ರವರ ಸಮಾಜ ಸೇವೆ ಧೈರ್ಯ ಮತ್ತು ಉದ್ಯಮದ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಂಜನ್‌ರವರ ಮಕ್ಕಳಾದ ರಾಹುಲ್ ರಾವ್ ಮತ್ತು ರತೀಶ್ ರಾವ್ ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಾನ್ ಅರ್ವಿನ್ ಡಿ.ಸೋಜಾ, ಕೋಶಾಧಿಕಾರಿ ಪುಪ್ಪ ರಾಜ್ ಶೆಟ್ಟಿಉಪಸ್ಥಿತರಿದ್ದರು ಹಾಗೂ ಎಲ್ಲಾ ಸೀನಿಯರ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕೊನೆಯಲ್ಲಿ ಸದಸ್ಯರೆಲ್ಲರೂ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ನಮನ ಸಲ್ಲಿಸಿದರು.

Exit mobile version