Site icon Suddi Belthangady

ಬೆಳಾಲು: ಶ್ರೀ ರಾಮ್ ಶಾಖೆ ವತಿಯಿಂದ 17ನೇ ಯೋಜನೆಯ ಸಹಾಯಧನ ಹಸ್ತಾಂತರ

ಬೆಳಾಲು: ಶ್ರೀ ರಾಮ್ ಶಾಖೆ ವತಿಯಿಂದ ಧರ್ಮ, ಸೇವಾ, ಜಾಗೃತಿ, ಪ್ರಗತಿ, ಪ್ರಶಿಕ್ಷಣ ಎಂಬ ದ್ಯೇಯವನ್ನಿಟ್ಟುಕೊಂಡ ಕೆಲ ಯುವ ಮನಸ್ಸುಗಳು ಒಂದಾಗಿ ಸಮಾಜ ಸೇವೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಾರಣದಿಂದ 17 ವರ್ಷದಿಂದ ಬಡ ಹಾಗೂ ನೊಂದ ಕುಟುಂಬಗಳಿಗೆ ಸಹಾಯಧನದ ನೆರವನ್ನು ನೀಡುತ್ತಾ ಬರುತ್ತಿದೆ.

ಅದೇ ರೀತಿ, 16ನೇ ಯೋಜನೆಯನ್ನು ಪೂರ್ತಿಗೊಳಿಸಿದ ಶ್ರೀ ರಾಮ ಶಾಖೆಯು ತನ್ನ 17ನೇ ಯೋಜನೆಯ ಸಹಾಯಧನವನ್ನು ಅಪಘಾತದಿಂದ ಕೈಗಳಿಗೆ ಬಲವಾದ ಏಟು ಬಿದ್ದು ಚಿಕಿತ್ಸೆ ಪಡೆಯುತ್ತಿರುವ ಬೆಳಾಲುವಿನ ಸುಬ್ರಮಣ್ಯರವರಿಗೆ 10 ಸಾವಿರ ಮೊತ್ತ ಹಾಗೂ 25ಕೆಜಿ ಅಕ್ಕಿಯನ್ನು ನೀಡಲಾಯಿತು.

Exit mobile version