Site icon Suddi Belthangady

ಉಪ್ಪಾರಪಳಿಕೆ-ಗೊಳಿತೊಟ್ಟು ರಸ್ತೆಯ ಉಪ್ಪಾರಹಳ್ಳ ಬಳಿ ಸ್ಥಳೀಯರಿಂದ ಶ್ರಮದಾನ

ಕೊಕ್ಕಡ: ಉಪ್ಪಾರಪಳಿಕೆಯಿಂದ ಗೊಳಿತೊಟ್ಟು ಸಂಚರಿಸುವ ರಸ್ತೆಯ ಉಪ್ಪಾರಹಳ್ಳ ಸಮೀಪ ರಸ್ತೆ ಬದಿಯ ಡಾಮರ್ ಮಳೆಯಿಂದಾಗಿ ಸಂಪೂರ್ಣ ಕೊಚ್ಚಿ ಹೋಗಿದ್ದು ಸಂಚರಿಸಲು ಸಮಸ್ಯೆಯಾಗುತ್ತಿದ್ದು ಮತ್ತು ಇತ್ತೀಚೆಗೆ ಯುವಕನೋರ್ವ ಆ ಸ್ಥಳದಲ್ಲಿ ಅಪಘಾತಕ್ಕೆ ಒಳಗಾಗಿದ್ದು ಮನಗಂಡು ಕೆಂಪು ಕಲ್ಲಿನ ಹುಡಿಯನ್ನು ಟಿಪ್ಪರ್ ಮೂಲಕ ತಂದು ಸ್ಥಳೀಯ ಹಿಟಾಚಿ ಮಾಲಕ ಸಂತೋಷ್ ಆಲಂಬಿಲರವರು ಹಿಟಾಚಿಯಲ್ಲಿ ಉಚಿತವಾಗಿ ಕೆಲಸ ಮಾಡಿಕೊಟ್ಟರು.

ಇವರಿಗೆ ಕೊಕ್ಕಡ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಳಂಬಿಲ ಮತ್ತು ನವೀನ್ ಆಳಂಬಿಲ ಶ್ರಮದಾನಕ್ಕೆ ಸಹಕರಿಸಿದರು.

Exit mobile version