Site icon Suddi Belthangady

ಓಡಿಲ್ನಾಳ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಓಡಿಲ್ನಾಳ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಶ್ರೀರಾಮನಗರ ಒಡಿಲ್ನಾಳ ಇವರ ವತಿಯಿಂದ, ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಲಿರುವ ದ್ವಿತೀಯ ವರ್ಷದ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ. ಕಿರಾತಮೂರ್ತಿ ದೇವಾಲಯದ ಆವರಣದಲ್ಲಿ‌ ಧಾರ್ಮಿಕ ಚಿಂತಕರಾದ ಹೊನ್ನಪ್ಪ ಪೊಕ್ಕಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಿರಾತಮೂರ್ತಿ ದೇವಸ್ಥಾನದ ಅರ್ಚಕರಾದ ಪಸನ್ನ ಭಟ್, ಅಧ್ಯಕ್ಷ ಗೋಪಾಲಶೆಟ್ಟಿ ಕೋರಿಯಾರು ಉಪಸ್ಥಿತರಿದ್ದರು.

ಅದೇ ರೀತಿ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶ್ರೀ ಓಡಿಲ್ನಾಳ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ರಾಮನಗರ, ಓಡಿಲ್ನಾಳ ಇದರ ಅಧ್ಯಕ್ಷ ನಿತೇಶ್ ಕೆ ಓಡಿಲ್ನಾಳ, ಗೌರವಾಧ್ಯಕ್ಷ ರಾಮಣ್ಣ ಕೋಲಾಜೆ, ಕಾರ್ಯದರ್ಶಿ ಸುದೀಪ್ ಶೆಟ್ಟಿ ಮೂಡೈಲು, ಜೊತೆ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ಸಂಬೊಳ್ಯ, ಉಪಾಧ್ಯಕ್ಷ ಉಮೇಶ್ ಕುಲಾಲ್ ಕೊಂಡೆಮಾರು, ಶಿವರಾಮ್ ಪೂಜಾರಿ ಕಟ್ಟದ ಬೈಲು, ಜಗದೀಶ ಉಳತ್ತೋಡಿ ಉಪಸ್ಥಿತರಿದ್ದರು.

Exit mobile version