Site icon Suddi Belthangady

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಡಾlರಮೇಶ್ ಅಧಿಕಾರ ಸ್ವೀಕಾರ

ಅಳದಂಗಡಿ: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದಕಟ್ಟೆ ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿಯು ಮುಕ್ತಾಯವಾಗಿದ್ದು ಅಧಿಕಾರ ಹಸ್ತಾಂತರ ಸೆ.25ರಂದು ನೆರವೇರಿತು.

ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಅಳದಂಗಡಿ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಕೀಯ ಪರೀವೀಕ್ಷಕ ಡಾlರಮೇಶ್ ಅವರಿಗೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗಂಗಾಧರ‌ ಮಿತ್ತಮಾರು ಅವರು ನಿರ್ಣಯ, ಲೆಕ್ಕಪುಸ್ತಕಗಳನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.

ಅರ್ಚಕ ಪ್ರವೀಣ ಮಯ್ಯ, ನಿತ್ಯಾನಂದ ಶೆಟ್ಟಿ ನೊಚ್ಚ, ಸುರೇಶ್ ಶೆಟ್ಟಿ‌ ಕುರೆಲ್ಯ, ಪ್ರಸನ್ನ ಮಯ್ಯ, ಕೃಷ್ಣಪ್ಪ ಉಪಸ್ಥಿತರಿದ್ದರು.

Exit mobile version