Site icon Suddi Belthangady

ಕಲ್ಮಂಜ ದೇವರಗುಡ್ಡೆ ನಿವಾಸಿ ಹರೀಶ್ಚಂದ್ರ ಗೌಡ ನಾಪತ್ತೆ

ಕಲ್ಮಂಜ: ಪಜಿರಡ್ಕ ದೇವರಗುಡ್ಡೆ ನಿವಾಸಿ ಹರೀಶ್ಚಂದ್ರ ಗೌಡ(66 ವ) ಇವರು ಸೆ.23ರಂದು ಬೆಳಗ್ಗೆ ಉಜಿರೆಗೆ ಹೋದವರು ಮಧ್ಯಾಹ್ನ 1 ಗಂಟೆಗೆ ತನ್ನ ಮಗನಿಗೆ ಸಿಕ್ಕಿದ್ದು, ಮನೆಗೆ ಬರಲು ತಿಳಿಸಿದಾಗ, ನನಗೆ ಬೆಳ್ತಂಗಡಿಗೆ ಹೋಗಲಿದೆ ಎಂದು ತಿಳಿಸಿರುತ್ತಾರೆ. ಮೊಬೈಲ್ ಸಂಪರ್ಕಿಸಿದಾಗ ಯಾವುದೇ ಕರೆಗೆ ಸ್ಪಂದಿಸುತ್ತಿಲ್ಲ ಮತ್ತು ಸಂಜೆಯಾದರೂ ಮನೆಗೆ ಬರದೇ ಇರುವುದನ್ನು ಗಮನಿಸಿದ ಮನೆಯವರು ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಗ ನವೀನ್ ಸುದ್ದಿ ಬಿಡುಗಡೆಗೆ ತಿಳಿಸಿರುತ್ತಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Exit mobile version