Site icon Suddi Belthangady

ಮಾಲಾಡಿ: ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಬಿ.ರಾಮಣ್ಣ ಶೆಟ್ಟಿ ನಿಧನ

ಮಾಲಾಡಿ: ಮಾಲಾಡಿ ನಿವಾಸಿ ಮಾಜಿ ಭೂನ್ಯಾಯ ಮಂಡಳಿ ಸದಸ್ಯ ಬಿ.ರಾಮಣ್ಣ ಶೆಟ್ಟಿ(86 ವ)ರವರು ಸೆ.20ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಬೆಳ್ತಂಗಡಿ ತಾಲೂಕು ಎ.ಪಿ.ಎಂ.ಸಿ ಉಪಾಧ್ಯಕ್ಷರಾಗಿ, ಭೂನ್ಯಾಯ ಮಂಡಳಿ ಸದಸ್ಯರಾಗಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯಾಗಿ, ಮಾಜಿ ಸಚಿವ ಕೆ.ಗಂಗಾಧರ ಗೌಡರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿಯವರ ಕಿಸಾನ್ ಸಭಾ ಟ್ರಸ್ಟ್ ನ ಸಂಯೋಜಕರಾಗಿ, ವಿವಿಧ ರಂಗಗಳಲ್ಲಿ 40 ವರ್ಷ ಅವಧಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಗಿಸಿಕೊಂಡಿದ್ದರು.

ಮೃತರು ಪತ್ನಿ ವಸಂತಿ ಆರ್ ಶೆಟ್ಟಿ, ಪುತ್ರ ಗುರುಪ್ರಸಾದ್, ಪುತ್ರಿಯರಾದ ಸವಿತಾ, ಕವಿತಾ ಹಾಗೂ ಸೊಸೆ ಪುಷ್ಪಾವತಿ, ಅಳಿಯಂದಿರಾದ ಪದ್ಮನಾಭ ಶೆಟ್ಟಿ, ಪಾಲಾಕ್ಷ ರೈ ಅವರನ್ನು ಅಗಲಿದ್ದಾರೆ.

Exit mobile version