Site icon Suddi Belthangady

ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಪೋಷಣ್ ಮಸಾಚರಣೆ

ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಪೋಷಣ್ ಮಸಾಚರಣೆ ಕಾರ್‍ಯಕ್ರಮವನ್ನು ಸೆ.21ರಂದು ನಡೆಸಲಾಯಿತು.ಈ ಸಭೆಯಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಶ್ಮಿತಾ, ಆರ್ಥಿಕಾ ಸಾಕ್ಷರತೆ ಇಲಾಖೆಯ ಉಷಾ ಕಾಮತ್, ಆರೋಗ್ಯ ಕಾರ್‍ಯಕರ್ತೆ ಪ್ರಮೀಳಾ, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಗೌಡ, ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ, ಶೋಭಾ ಹಾಗೂ ಶಾಲಾ ಮುಖ್ಯ ಶಿಕ್ಷಕಿಯಾದ ಧರ್ಣಮ್ಮ ಹಾಗೆಯೇ ಆಶಾ ಕಾರ್‍ಯಕರ್ತೆ ಸರೋಜಿನಿ , ಮಕ್ಕಳ ತಾಯಂದಿರು ಸ್ತ್ರೀ ಶಕ್ತಿ ಸದಸ್ಯರು ಹಾಜರಿದ್ದರು.

ಉಷಾ ಕಾಮತ್ ಪೊಷಣ್ ಅಭಿಯಾನದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಮೀಳಾ ಆರೋಗ್ಯ ಕಾರ್‍ಯಕರ್ತೆ ಇವರು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ವಸಂತಿ ಅಂಗನವಾಡಿ ಕಾರ್‍ಯಕರ್ತೆ ನಿರೂಪಿಸಿ, ಆಶಾ ಕಾರ್‍ಯಕರ್ತೆ ಸರೋಜಿನಿ ಸ್ವಾಗತಿಸಿ, ಸ್ತ್ರೀಶಕ್ತಿ ಸದಸ್ಯೆ ವಿದ್ಯಾ ಧನ್ಯವಾದಗೈದರು.

Exit mobile version