Site icon Suddi Belthangady

ಬೆಳ್ತಂಗಡಿಯ ಪ್ರಪ್ರಥಮ ಛಾಯಾಗ್ರಾಹಕ ಶಶಿಧರ್ ರಾವ್ ವಿಧಿವಶ- ನಾಳೆ ಉಡುಪಿಯಲ್ಲಿ ಅಂತ್ಯಕ್ರಿಯೆ

ಬೆಳ್ತಂಗಡಿಯ ಪ್ರಪ್ರಥಮ ಛಾಯಾಗ್ರಾಹಕರಾದ ಶಾಂತಲಾ ಸ್ಟುಡಿಯೋದ ಸ್ಥಾಪಕ, ಎಸ್.ಕೆ.ಪಿ.ಎ ಇದರ ಅಜೀವ ಸದಸ್ಯರಾದ ಶಶಿಧರ್ ರಾವ್(82 ವ) ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಉಡುಪಿಯ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಇಂದು (ಸೆ.23)ವಿಧಿವಶರಾದರು.ಬೆಳ್ತಂಗಡಿಯಲ್ಲಿ ಛಾಯಾಗ್ರಾಹಕರಾಗಿ ಜನಪ್ರಿಯರಾಗಿದ್ದ ಶಶಿಧರ ರಾವ್ ತಮ್ಮ ಸೌಮ್ಯ ಸ್ವಭಾವದ ಮೂಲಕ ಅಪಾರ ಜನರ ಸ್ನೇಹ ಪಡೆದಿದ್ದರು.

ಮೃತರು ಪತ್ನಿ ಅರುಣ ಶಶಿಧರ್ ರಾವ್, ಮಕ್ಕಳಾದ ಕುಮಾರ ರಾಘವೇಂದ್ರ, ಪೂರ್ಣಿಮಾ ಅರುಣ್ ಕುಮಾರ್, ಪ್ರತಿಭಾ ಶ್ರೀಧರ್ ರಾವ್, ಪ್ರಿಯಾ ಶರ್ಮ ಮತ್ತು ಅಳಿಯಂದಿರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಗ ಕುಮಾರ ರಾಘವೆಂದ್ರ ರವರು ವಿದೇಶದಲ್ಲಿ ಇರುವುದರಿಂದ ಅವರ ಆಗಮನದ ನಂತರ ಉಡುಪಿಯಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಈ ಬಗ್ಗೆ ಮಗ ಕುಮಾರ ರಾಘವೇಂದ್ರ ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.

Exit mobile version