Site icon Suddi Belthangady

ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಸೆಯ್ಯದ್ ಇಸ್ಮಾಯಿಲ್ ಅಲ್ ಹಾದಿ ಮದನಿ ತಂಙಳ್ ಮನೆಯಲ್ಲಿ ಹುಬ್ಬುರ್ರಸೂಲ್ ಗ್ರಾಂಡ್ ಮೌಲೀದ್ ಮಜ್ಲಿಸ್

ಬೆಳ್ತಂಗಡಿ: ಸಂಯುಕ್ತ ಜಮಾಅತ್ ಅಧ್ಯಕ್ಷ ಸೆಯ್ಯೆದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಉಜಿರೆ ಇವರ ಮನೆಯಲ್ಲಿ ಹುಬ್ಬುರ್ರಸೂಲ್ ಗ್ರಾಂಡ್ ಮೌಲೀದ್ ಮಜ್ಲಿಸ್ ಸೆ.22ರಂದು ಕೂರ ತಂಙಳ್ ಸುಪುತ್ರ ಸಯ್ಯದ್ ಅಬ್ದುರ್ರಹ್ಮಾನ್ ಮಸ್ ಊದು ತಂಙಳ್ ರವರ ಅಧ್ಯಕ್ಷತೆಯಲ್ಲಿ ತಂಙಳ ಮನೆ ಉಜಿರೆಯಲ್ಲಿ ಜರಗಿತು.ಉಜಿರೆ ಮುದರ್ರಿಸ್ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಕಾನಿ ಯವರು ಮೌಲೀದ್ ನೇತ್ರತ್ವ ನೀಡಿದರು.

ಸೆಯ್ಯೆದ್ ಕುಂಙ ಕೋಯ ತಂಙಳ್ ಮುಟ್ಟಂ, ಸೆಯ್ಯದ್ ಅಬೂಬಕ್ಕರ್ ತಂಙಳ್ ಮುಟ್ಟಂ, ಶರಫುದ್ದೀನ್ ತಂಙಳ್ ವೇಣೂರು, ಎಸ್ ಎಂ ಕೋಯ ತಂಙಳ್ ಉಜಿರೆ, ಪಿ ಕೆ ಮದನಿ ಉಸ್ತಾದ್ ಅಳಕೆ, ಅಬ್ಬಾಸ್ ಮದನಿ ಮುಕ್ಕಚ್ಚೇರಿ, ಎಂ ಎಸ್ ಎಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ತಲಪಾಡಿ, ಕಾಸಿಂ ಮದನಿ ಕರಾಯ, ಸಲಾಹುದ್ದೀನ್ ಸಖಾಫಿ ಮೂಡಡ್ಕ, ಅಶ್ರಫ್ ಸಖಾಫಿ ಮೂಡಡ್ಕ, ಮಜೀದ್ ನಯೀಮಿ ಮುದರ್ರಿಸ್ ಮೂಡಡ್ಕ .ಮದನೀಸ್ ಅಸೋಶಿಯೇಶನ್ ಜಿಲ್ಲಾ ಕಾರ್ಯದರ್ಶಿ ಹಂಝ ಮದನಿ ಗುರುವಾಯನಕೆರೆ, ಹಮೀದ್ ಫೈಝಿ ಕಿಲ್ಲೂರು, ಶಾಫಿ ಸಖಾಫಿ ಕೊಕ್ಕಡ, ಅಬೂಬಕ್ಕರ್ ಸ ಅದಿ ಮಜೂರು, ಸಂಯುಕ್ತ ಜಮಾಅತ್ ನಾಯಕರಾದ ಬದ್ರುದ್ದೀನ್ ನಾಳ, ಕಾಸಿಂ ಪದ್ಮುಂಜ, ಅಬ್ದುಲ್ ಖಾದರ್ ಹಾಜಿ ಉಜ್ರಿಬೆಟ್ಟು ಉಸ್ಮಾನ್ ಹಾಜಿ ಸರಳೀಕಟ್ಟೆ, ಅಬ್ಬಾಸ್ ಬಟ್ಲಡ್ಕ, ಮುತ ಅಲ್ಲಿಂ ವಿಧ್ಯಾರ್ಥಿಗಳು ಸೇರಿದಂತೆ ಹಲವಾರು ಉಲಮಾ ಉಮರಾ ನೇತಾರರು, ಸಂಘಟನಾ ನಾಯಕರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಮುತ ಅಲ್ಲಿಂ ವಿಧ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮೊಡಂತಿಯಾರ್ ರವರು ಧನ್ಯವಾದ ಸಲ್ಲಿಸಿದರು.

Exit mobile version