Site icon Suddi Belthangady

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯರಿಗೆ ದಿ|ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

ಬೆಳಾಲು: ಬೆಳಾಲು ಗ್ರಾಮದ ಮಾಯ ಗಾಂಧಿನಗರ ಚಂದ್ರಯ್ಯ ಆಚಾರ್ಯ ಮತ್ತು ಜಾನಕಿ ದಂಪತಿಯವರ ಕಾಷ್ಠ ಶಿಲ್ಪ ಕಲೆಯಲ್ಲಿ ಕುಸುರಿ ಕೆಲಸ, ಮೂರ್ತಿ ಕೆತ್ತನೆ, ಪ್ರಕೃತಿ ಸೌಂದರ್ಯದ ಭಾವಚಿತ್ರದ ಕೆತ್ತನೆಯನ್ನು ಮಾಡಿ, ನೈಜತೆಯನ್ನು ಶಿಲ್ಪ ಕಲೆಯಲ್ಲಿ ಮಾಡಿರುವ ಶಿಲ್ಪಿ ಶಶಿಧರ ಆಚಾರ್ಯ ಇವರ ಸಾಧನೆಯನ್ನು ಗುರುತಿಸಿ ಸೆ.22ರಂದು ಮಂಗಳೂರಿನಲ್ಲಿ ನಡೆದ ವಿಶ್ವಕರ್ಮ ಬ್ಯಾಂಕಿನ 49ನೇ ಮಹಾಸಭೆಯಲ್ಲಿ ದಿ.ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ ನೀಡಿ ಗೌರವಿಸಿದರು.

ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪ ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ, ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು ಸನ್ಮಾನಿಸಿದರು.

ಇವರು ಚಂದ್ರಯ್ಯ ಆಚಾರ್ಯ ಮತ್ತು ಜಾನಕಿ ದಂಪತಿಯ ಪುತ್ರ.

Exit mobile version