Site icon Suddi Belthangady

ವೇಣೂರು: 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು: ಶ್ರೀ ಶಾರದಾ ಸೇವಾ ಟ್ರಸ್ಟ್ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇದರ ಜಂಟಿ ಆಶ್ರಯದಲ್ಲಿ ಜರಗುವ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಳದ ಅರ್ಚಕ ಬಿ.ಆನಂದ ರಾವ್ ದೇವರಿಗೆ ಸಮರ್ಪಿಸಿ ಶಾರದೋತ್ಸವದ ಯಶಸ್ವಿಗೆ ಪ್ರಾರ್ಥಿಸಿದರು.

ಎಸ್ ಕೆ ಡಿ ಆರ್ ಡಿ ಪಿ ಸೇವಾ ಪ್ರತಿನಿಧಿಗಳಾದ ಜಯಂತಿ, ನಳಿನಿ, ಸುನೀತಾ ಹಾಗೂ ಶಿಕ್ಷಕಿ ಬಬಿತಾ ಪ್ರಶಾಂತ್ ದೇವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಪಿ.ಧರಣೇಂದ್ರ ಕುಮಾರ್ ಹೊಸಂಗಡಿ, ಕಾರ್ಯದರ್ಶಿ ಅರವಿಂದ ಶೆಟ್ಟಿ, ಸದಸ್ಯರುಗಳಾದ ಸತ್ಯೇಂದ್ರ ರಾವ್, ಅಶೋಕ್ ಪಾಣೂರು, ಸತೀಶ್ ಹೆಗ್ಡೆ, ಶಶಿಧರ ಶೆಟ್ಟಿ, ರಾಜೇಶ್ ಪೂಜಾರಿ, ದೇಜಪ್ಪ ಶೆಟ್ಟಿ, ದಯಾನಂದ ದೇವಾಡಿಗ, ಕೊರಗಪ್ಪ ಎಂ ಮತ್ತು ಸೇಸ ಎಂ ಉಪಸ್ಥಿತರಿದ್ದರು.

Exit mobile version