Site icon Suddi Belthangady

ಕೊಯ್ಯೂರು ದೇವಸ್ಥಾನ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ದೇವಸ್ಥಾನ ಶಾಲೆಯ ಖಾಲಿ ಜಮೀನಿನಲ್ಲಿ 150 ಅಡಿಕೆ ಗಿಡಗಳನ್ನು ನೆಟ್ಟು ತೋಟ ನಿರ್ಮಾಣದ ಕೆಲಸವನ್ನು ಶ್ರಮದಾನದ ಮೂಲಕ ಮಾಡಲಾಯಿತು.

ವಿಜಯ ಕುಮಾರ್ ಮತ್ತು ಚೇತನಾ ಸಮೃದ್ಧಿ ನಿಲಯ ಕೊಯ್ಯೂರು ಇವರು ಕೊಡುಗೆಯಾಗಿ ನೀಡಿದ 150 ಅಡಿಕೆ ಗಿಡಗಳನ್ನು ಶಾಲಾ ಪೋಷಕರಾದ ಬಾಬು ಗೌಡ ಪಾದೆ, ಪುರಂದರ ಗೌಡ, ಸುಧಾಕರ ದೇವಾಡಿಗ, ಗೋಪಾಲ ಗೌಡ, ಜಯಾನಂದ ಮಲೆ ಕಿನ್ಯಾಜೆ, ಸಂಜೀವ ಗೌಡ, ಯೋಗೀಶ್ ಹೊಸ್ಕೊಲು, ನಾರಾಯಣ ಮಡಿವಾಳ, ಅಶ್ವಿನಿ, ಪ್ರಮೀಳಾ, ರಾಜೇಶ್ ಹೇಮಲ್ಕೆ ಮತ್ತು ಜಯ ಇವರು ಶ್ರಮದಾನದ ಮೂಲಕ ನೆಟ್ಟು ಕೊಟ್ಟರು.

Exit mobile version