Site icon Suddi Belthangady

ಕಲ್ಮಂಜ: ಅಕ್ಷಯನಗರ ನಿವಾಸಿ ತನಿಯ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಅಕ್ಷಯ ನಗರ ಎಂಬಲ್ಲಿ ತನಿಯ (67ವ) ಎಂಬ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ (ಸೆಪ್ಟೆಂಬರ್ 19) ನಡೆದಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಪತ್ನಿ ಮೂರು ತಿಂಗಳ ಹಿಂದೆ ನಿಧನವಾಗಿದ್ದು, ಮೃತರು ಓರ್ವ ಮಗಳು ಪದ್ಮಾವತಿ ಅವರನ್ನು ಅಗಲಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ.

Exit mobile version