Site icon Suddi Belthangady

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಟ್ರಸ್ಟ್‌ನ ಲೋಗೋ ಲೋಕಾರ್ಪಣೆ ಮಾಡಿದ ಡಾ.ಧರ್ಮಪಾಲನಾಥ ಸ್ವಾಮೀಜಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ.) ಇದರ ಹೊಸ ಲೋಗೋ ಅನಾವರಣಗೊಂಡಿದ್ದು, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಯವರು ಲೋಕಾರ್ಪಣೆ ಮಾಡಿದರು.

ಮಂಗಳೂರಿನ ಕಾವೂರು ಆದಿಚುಂಚನಗಿರಿ ಶಾಖಾ ಮಠದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಸೇವಾ ಸಂಘ (ರಿ.) ಇದರ ಉಪಾಧ್ಯಕ್ಷ ಶ್ರೀ ಭಾಸ್ಕರ ಗೌಡ ದೇವಸ್ಯ, ಜಿಲ್ಲಾ ನಿರ್ದೇಶಕ ಲಿಂಗಯ್ಯ, ರಕ್ಷಿತ್ ಪುತ್ತಿಲ, ದಾಮೋದರ ಗೌಡ ಸುರುಳಿ, ವಿಜಯ ಗೌಡ ವೇಣೂರು, ಸೂರಜ್ ರಾಜ್ ಗೌಡ ವಳಂಬ್ರ, ಸೌಮ್ಯಲತಾ ಗೌಡ ಹಾಗೂ ಸೇವಾ ಸಮಿತಿಯ ಗೌರವ ಅಧ್ಯಕ್ಷ ರಂಜನ್ ಜಿ ಗೌಡ, ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಕಾರ್ಯಾಧ್ಯಕ್ಷ ಶ್ರೀನಿವಾಸ್ ಗೌಡ ಬೆಳಾಲು, ಜಯಂತ ಗೌಡ ಗುರಿಪಳ್ಳ, ಪ್ರಧಾನ ಕಾರ್ಯದರ್ಶಿ ಭರತ್ ಗೌಡ ಬಂಗಾಡಿ, ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ಫೌಂಡರ್ ಟ್ರಸ್ಟಿಗಳಾದ ರಂಜನ್ ಜಿ ಗೌಡ, ವಿಜಯ ಗೌಡ ವೇಣೂರು, ಕೆ.ಜಯಂತ ಗೌಡ ಗುರಿಪಳ್ಳ, ಶ್ರೀನಿವಾಸ್ ಗೌಡ ಬೆಳಾಲು, ಮೋಹನ್ ಕುಮಾರ್ ಕಲ್ಮಂಜ, ಭರತ್ ಕುಮಾರ್ ಬಂಗಾಡಿ, ದಾಮೋದರ ಗೌಡ ಸುರುಳಿ, ಸೂರಜ್ ಗೌಡ ವಳಂಬ್ರ, ನವೀನ್ ಬಿ.ಕೆ, ವಸಂತ ಗೌಡ ಮರಕಡ ಹಾಗೂ ಟ್ರಸ್ಟಿಗಳು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version