Site icon Suddi Belthangady

ಮಡಂತ್ಯಾರು: ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಕನ್ಯಾ ಸಂಕ್ರಮಣ ಸೇವೆ- ಲಕ್ಷ ಬಿಲ್ವ ತುಳಸಿ ಅರ್ಚನೆ ಹಾಗೂ ದೈವಗಳಿಗೆ ನೇಮೋತ್ಸವ

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ನಡುಬೊಟ್ಟು ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಸೆ.16ರಂದು ಕನ್ಯಾ ಸಂಕ್ರಮಣ ಪ್ರಯುಕ್ತ ತೆನೆ ತರುವುದು, ಲಕ್ಷ ತುಳಸಿ ಬಿಲ್ವಾರ್ಚನೆ ಹಾಗೂ ಪಟ್ಟದ ದೈವ ಅಣ್ಣಪ್ಪ ಪಂಜುರ್ಲಿ, ಪಿಲಿಚಾಮುಂಡಿ ದೈವದ ನೇಮೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು.

ತೆನೆ ತರುವ ಕಾರ್ಯಕ್ರಮವು ಕ್ಷೇತ್ರದ ಪರಿಧಿಯಲ್ಲಿ ಇರುವ ಸ್ಥಳಗಳಿಂದ ಬ್ಯಾಂಡ್ ಓಲಗ ಜೊತೆ ಭಕ್ತರ ಸಮ್ಮುಖ ದಲ್ಲಿ ನೆರವೇರಿತು. ಪಟ್ಟದ ದೈವ ಅಣ್ಣಪ್ಪ ಪಂಜುರ್ಲಿ, ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆದು ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೈವರಲ್ಲಿ ಪ್ರಾರ್ಥಿಸಿ ಆಶೀರ್ವಾದ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು.

ಲಕ್ಷ ಬಿಲ್ವಾರ್ಚನೆ ವೆಂಕಟೇಶ್ ತಂತ್ರಿಗಳು ನೆರವೇರಿಸಿದರು. ಲಕ್ಷ ಬಿಲ್ವಾರ್ಚನೆ ಸೇವಾರ್ಥಿ ಮಂಜುನಾಥ್ ಮುಂಬಯಿ, ಕ್ಷೇತ್ರದ ಧರ್ಮದರ್ಶಿ ರವಿ ಎನ್, ಆಡಳಿತ ಮೊಕ್ತೇಸರ ವಿಶ್ವನಾಥ್ ಎನ್, ಶ್ರೀ ರೌದ್ರನಾಥೇಶ್ವರ ಸೇವಾ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಮೂಲ್ಯ ಅನಿಲಡೆ ಹಾಗೂ ಪದಾಧಿಕಾರಿಗಳು ಸದಸ್ಯರು, ಭಕ್ತಾದಿಗಳು ಪಾಲ್ಗೊಂಡರು.

Exit mobile version