Site icon Suddi Belthangady

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ನ ನ್ಯಾಯ ಸಮಿತಿಗೆ ಬಂದ ದೂರು ಅರ್ಜಿಯ ವಿಚಾರಣೆ- ಸ್ಥಳ ಪರಿಶೀಲನೆ

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ನ ನ್ಯಾಯ ಸಮಿತಿಗೆ ಬಂದ ದೂರು ಅರ್ಜಿಯ ವಿಚಾರಣೆಯನ್ನು ಹಾಗೂ ಸ್ಥಳ ಪರಿಶೀಲಿಸಿ ಇತ್ಯರ್ಥಪಡಿಸಲಾಯಿತು.

ಕಳಿಯ ಗ್ರಾಮ ಪಂಚಾಯತ್ ನ ಎರಡನೇ ವಾರ್ಡ್ ನ ಕಂಬಳದಡ್ಡ ಎಂಬಲ್ಲಿ ಜಾಗ ಖರೀದಿ ಮಾಡಿದವರೊಬ್ಬರು ಮಣ್ಣು ಹಾಕಿ ಸಮತಟ್ಟು ಮಾಡಿದ್ದರಿಂದ ಸ್ಥಳೀಯ ಕೃಷಿಕರ ಅಡಿಕೆ ತೋಟಕ್ಕೆ ಹಾನಿಯಾದ ಬಗ್ಗೆ ದೂರು ಅರ್ಜಿಯನ್ನು ಸ್ಥಳ ಪರಿಶೀಲಿಸಿ ಸೌಹಾರ್ಧಯುತವಾಗಿ ಪರಿಹರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ, ನ್ಯಾಯ ಸಮಿತಿಯ ಅಧ್ಯಕ್ಷೆ ಪುಷ್ಪಾ ನಾಳ, ಉಪಾದ್ಯಕ್ಷೆ ಇಂದಿರಾ, ಸದಸ್ಯರಾದ ಸುಧಾಕರ ಮಜಲು, ಅಬ್ದುಲ್ ಕರೀಮ್, ಶ್ವೇತಾ ಮತ್ತು ಕಾರ್ಯದರ್ಶಿ ಕುಂಙ.ಕೆ, ಸಿಬ್ಬಂದಿ ರವಿ ಎಚ್ ಮತ್ತು ದೂರುದಾರರು ಮತ್ತು ಸ್ಥಳೀಯರು ಹಾಜರಿದ್ದರು.

Exit mobile version