Site icon Suddi Belthangady

ಬೆಳ್ತಂಗಡಿ: 70ನೇ ವನ್ಯಜೀವಿ ಸಪ್ತಾಹ ಆಚರಣೆ: ವನ್ಯ ಜೀವಿ ವಲಯದ ವತಿಯಿಂದ ನಡ ಶಾಲೆಯಲ್ಲಿ ವಿವಿಧ ಸ್ಪರ್ಧೆ

ಬೆಳ್ತಂಗಡಿ: ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವನ್ಯಜೀವಿ ವಲಯ ಬೆಳ್ತಂಗಡಿ ವತಿಯಿಂದ 70ನೇ ವನ್ಯಜೀವಿ ಸಪ್ತಾಹ ಆಚರಣೆಯ ಸ್ಪರ್ಧಾ ಕಾರ್ಯಕ್ರಮ ಸೆ.18ರಂದು ನಡ ಶಾಲೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ನಡ ಸ.ಪ್ರೌ.ಶಾಲಾ ಪ್ರಾಶುಂಪಾಲ ಚಂದ್ರಶೇಖರ್, ನಡ ಹಿ.ಪ್ರಾ. ಶಾಲೆಯ ಅಧ್ಯಕ್ಷ ಶಿವಪುತ್ರ ಸುಣಗಾರ, ಆರ್‌ಎಫ್‌ಓ ಶರ್ಮಿಷ್ಠ ಹಾಗೂ ಡಿಆರ್‌ಏಪ್‌ಓ ಕಿರಣ್ ಪಾಟೀಲ್ ಉಪಸ್ಥಿತರಿದ್ದರು. ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ಚಿತ್ರಕಲಾ, ಪ್ರಬಂಧ, ಪ್ರಾಣಿ ಗುರುತಿಸುವಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಿಆರ್‌ಎಫ್‌ಓ ರಂಜಿತ್ ಕುಮಾರ್ ಸ್ವಾಗತಿಸಿದರು. ವಸಂತಿ ಪಿ. ನಿರೂಪಿಸಿದರು.

Exit mobile version