Site icon Suddi Belthangady

ಬರೆಂಗಾಯ: ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ

ಬರೆಂಗಾಯ: ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ ಸಂಘದ ಅಧ್ಯಕ್ಷರಾದ ಸುಂದರ ಗೌಡ ಕೆ ಇವರ ಅಧ್ಯಕ್ಷತೆಯಲ್ಲಿ ಕಲ್ಕುಡ ಗುಡ್ಡೆ ಮಚ್ಚಳೆ ಶ್ರೀಮತಿ ನಾಗವೇಣಿ ಅಮ್ಮ ಸಭಾಭವನದಲ್ಲಿ ನಡೆಯಿತು.

ಹೈನುಗಾರಿಕೆ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಘದ ಸದಸ್ಯರು ಆದ ಹೈನುಗಾರಿಕೆಯಲ್ಲಿ ಅಪಾರ ಅನುಭವವಿರುವ ಚಂದ್ರಶೇಖರ ಗೌಡ ಸದಸ್ಯರಿಗೆ ಮಾಹಿತಿ ನೀಡಿದರು.

ಉತ್ತಮ ಹೈನುಗಾರರಾದ ಚಂದ್ರಶೇಖರ ಗೌಡ, ಕಿಟ್ಟು ಮುಗೇರ, ವೆಂಕಪ್ಪ ಗೌಡ ರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಗಾಯತ್ರಿ ಹೆಚ್ ಗೌಡ, ನಿರ್ದೇಶಕರಾದ ರುಕ್ಮಯ ಪೂಜಾರಿ, ನಿರಂಜನ್, ಚೆನ್ನಪ್ಪ ದೇವಾಡಿಗ, ಮುಕುಂದ ದೇವದಾರ್, ಶಿವಪ್ರಸಾದ್, ಹೇಮಂತ ಗೌಡ, ಅಣ್ಣು ಗೌಡ, ಅಣ್ಣು, ಶಶಿಕಲಾ, ಗೀತಾ ಎಂ ಕೆ, ಸುಮನಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಾಯತ್ರಿ ಹೆಚ್ ಗೌಡ ಪ್ರಾರ್ಥಿಸಿ, ರುಕ್ಮಯ ಪೂಜಾರಿ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಶಾಜಿ ತೋಮಸ್ ವರದಿ ಮತ್ತು ಧನ್ಯವಾದವನ್ನು ನೆರವೇರಿಸಿದರು.ಸಿಬ್ಬಂದಿಗಳಾದ ಶೇಖರ ಗೌಡ, ಮೀನಾಕ್ಷಿ, ಶಶಿಕಲಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Exit mobile version