Site icon Suddi Belthangady

ಪದ್ಮುಂಜದಲ್ಲಿ ಸಂಭ್ರಮದ ಈದ್ ಮಿಲಾದ್

ಪದ್ಮುಂಜ: ಇಲ್ಲಿಯ ಖಲಂದರ್ ಷಾ ಜುಮಾ ಮಸೀದಿಯಲ್ಲಿ ಮುಹಮ್ಮದ್ ಪೈಗಂಬರರ( ಸ ಅ ) 1499ನೇ ಜನ್ಮದಿನಾಚರಣೆ ಈದ್ ಮಿಲಾದ್ ಜಮಾಅತ್ ಅಧ್ಯಕ್ಷರಾದ ರಫೀಕ್ ರವರ ಅಧ್ಯಕ್ಷತೆಯಲ್ಲಿ ಸೆ.15 ಮತ್ತು 16ರಂದು ಪದ್ಮುಂಜ ಮಸೀದಿ ಆವರಣದಲ್ಲಿ ಜರುಗಿತು. ಪದ್ಮುಂಜ ನುಸುರತ್ತುಸ್ಸಿಬಿಯಾನ್ ಮದರಸದ ವಿದ್ಯಾರ್ಥಿಗಳಿಂದ ಭಾಷಣ ಹಾಡು ಸಂಭಾಷಣೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಪದ್ಮುಂಜ ಪೇಟೆಯ ತನಕ ಸ್ವಲಾತ್ ಮೆರವಣಿಗೆ ನಡೆಸಿ ಸಭಾ ಕಾರ್ಯಕ್ರಮ ನಡೆಸಲಾಯಿತು.ಜಮಾಅತ್ ಕಾರ್ಯದರ್ಶಿ ಕಾಸಿಂ ಪದ್ಮುಂಜ ರವರು ಕಾರ್ಯಕ್ರಮ ಉದ್ಘಾಟಿಸಿದರು. ಅಬ್ದುರ್ರಾಶಿದ್ ಸ ಅದಿ ಪದ್ಮುಂಜ ರವರು ಮುಖ್ಯ ಪ್ರಭಾಷಣ ನಡೆಸಿ ಮಾನವತಾವಾದಿ ಪ್ರವಾದಿ ಮುಹಮ್ಮದ್ (ಸ ಅ )ರವರ ತತ್ವಾದರ್ಶಗಳನ್ನು ವಿವರಿಸಿದರು. ಸ್ಥಳೀಯ ಮಸೀದಿಯ ಖತೀಬ್ ಉಸ್ತಾದ್ ಮುಹಮ್ಮದ್ ನಿಜಾಮುದ್ದೀನ್ ಝುಹುರಿ, ಯಾಸಿರ್ ಹುಮೈದಿ, ಅಬ್ದುರಶೀದ್ ಅಲ್ ಹಿಕಮಿ, ಉಸ್ತಾರುಗಳು ಮಾತನಾಡಿ ಶುಭ ಹಾರೈಸಿದರು.

ಜಮಾತ್ ಕೋಶಾಧಿಕಾರಿ ಯೂಸುಫ್ ಹಾಜಿ. ಎಸ್ ವೈ ಎಸ್ ಅಧ್ಯಕ್ಷ ನಝೀರ್ ಮಲೆಂಗಲ್ಲು, ಎಸ್ ಎಸ್ ಎಫ್ ಅಧ್ಯಕ್ಷ ನಾಸಿರ್ ಮಲೆಂಗಲ್ಲು, ಸ್ಥಳೀಯ ಕಾಂಗ್ರೆಸ್ ನಾಯಕ ಸತೀಶ್ ರಾವ್ ಮಲೆಂಗಲ್ಲು, ಪದ್ಮುಂಜ .ನಾಫಿಈ ಹಾಸಿಮಿ ಪದ್ಮುಂಜ, ಎಸ್ ಎಸ್ ಎಫ್ ಕೋಶಾಧಿಕಾರಿ ಮುನೀರ್ ಅಂತರ ಸೇರಿದಂತೆ ಮುಸ್ಲಿಂ ಜಮಾಅತ್., ಎಸ್ ವೈ ಎಸ್. ಎಸ್ ಎಸ್ ಎಫ್.ಎಸ್ ಬಿ ಎಸ್. ವಿಧ್ಯಾರ್ಥಿಗಳು, ನಾಗರಿಕರು ಉಪಸ್ಥಿತರಿದ್ದರು.

ನಂತರ ನೆರೆದ ನಾಗರಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಸೆಕ್ಟರ್ ಕಾರ್ಯದರ್ಶಿ ನಿಜಾಮುದ್ದೀನ್ ನನ್ಯ ರವರು ಸ್ವಾಗತಿಸಿದರು.ಸೈಫುದ್ದೀನ್ ಹಾಸಿಮಿ ಪದ್ಮುಂಜ ಕಾರ್ಯಕ್ರಮ ನಿರೂಪಿಸಿದರು.ಯೂನಿಟ್ ಕಾರ್ಯದರ್ಶಿ ಅಸ್ಫಖ್ ರವರು ಧನ್ಯವಾದ ಸಲ್ಲಿಸಿದರು.

Exit mobile version