Site icon Suddi Belthangady

ಪಡ್ಡಂದಡ್ಕದಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭೋತ್ಸವ

ವೇಣೂರು: ನೂರುಲ್ ಹುಧಾ ಮಸೀದಿ ಪಡ್ಡಂದಡ್ಕ ಸಭಾಂಗಣದಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಮದರಸ ಮಕ್ಕಳಿಗೆ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಸೀದಿ ಅಧ್ಯಕ್ಷ ಇಸ್ಮಾಯಿಲ್.ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬ್ ಜನಾಬ್ ಅಶ್ರಫ್ ಫೈಝಿ ಅರ್ಕಾನ ಉದ್ಘಾಟಿಸಿ ದುವಾ ಮಾಡಿದರು.

ಪತ್ರಕರ್ತ ಮಹಮ್ಮದ್ ಎಚ್.ವೇಣೂರು ಶುಭ ಹಾರೈಸಿದರು. ಆಡಳಿತ ಸಮಿತಿಯ ಪ್ರಮುಖರಾದ ರಫೀಕ್ ಪಡ್ಡ,ಅಬ್ದುಲ್ ರಹಿಮಾನ್ ಕಟ್ಟೆ, ಖಾಲಿದ್ ಪುಲಾಬೆ, ಅಬ್ದುಸ್ಸಲಾಂ ಕೇಶವನಗರ,ಅಶ್ರಫ್ ಗಾಂಧಿನಗರ, ಇದ್ರಿಸ್ ಪುಲಾಬೆ, ಇರ್ಪಾನ್ ಯು.ಕೆ ಮತ್ತು ಶರ್ಪುದ್ದೀನ್ ತಂಗಳ್ , ಕರೀಂ ಕಟ್ಟೆ , ಎಸ್ ಕೆ ರಜಾಕ್ , ನಜೀರ್ ಹನಫಿ , ಜುಬೈರ್ ಆಝಹರಿ ಸಾಬಿತ್ ಉಸ್ತಾದ್ ಸೇರಿದಂತೆ ವಿದ್ಯಾರ್ಥಿಗಳು,ಜಮಾತಿನ ನಾಗರಿಕರು ಉಪಸ್ಥಿತರಿದ್ದರು.

Exit mobile version