Site icon Suddi Belthangady

ಸಾವ್ಯ: ಶ್ರೀ ಮಣಿಕಂಠ ಪ್ರೆಂಡ್ಸ್‌ ಕ್ಲಬ್‌ ನ ಮಹಾಸಭೆ- ನೂತನ ಅಧ್ಯಕ್ಷರಾಗಿ ಕೆ.ಸದಾಶಿವ ಹೆಗ್ಡೆ, ಕಾರ್ಯದರ್ಶಿಯಾಗಿ ಸಂದೀಪ್‌ ನೇಮಕ

ಸಾವ್ಯ: ಶ್ರೀ ಮಣಿಕಂಠ ಪ್ರೆಂಡ್ಸ್‌ ಕ್ಲಬ್‌ ಇದರ ಮಹಾಸಭೆ ಗುಜ್ಜೋಟ್ಟು ಜಯಶ್ರೀ ಕಾಂಪ್ಲೆಕ್ಸ್ ನಲ್ಲಿ ಅಧ್ಯಕ್ಷ ಗೋಪಾಲ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.

ಸಂಘದ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ನೂತನ ಅಧ್ಯಕ್ಷರಾಗಿ ಕೆ.ಸದಾಶಿವ ಹೆಗ್ಡೆ ಕುಂಟ್ಯಾನ, ಉಪಾಧ್ಯಕ್ಷರಾಗಿ ಗಣೇಶ್‌ ನೆಲ್ಲಿಗುಡ್ಡೆ ಸ್ವಸ್ತಿಕ್‌ ಕಡೆಕ್ಕಾರು, ಕಾರ್ಯದರ್ಶಿಯಾಗಿ ಸಂದೀಪ್‌ ಬೀಜದಡಿ, ಜೊತೆ ಕಾರ್ಯದರ್ಶಿಯಾಗಿ ಅಶೋಕ ಬೀಜದಡಿ, ಜೊತೆ ಕಾರ್ಯದರ್ಶಿಯಾಗಿ ದಿನೇಶ್‌ ಕೋಟ್ಯಾನ್‌ ಅನುರಾಧ ನಿವಾಸ, ಕೋಶಾಧಿಕಾರಯಾಗಿ ವಸಂತ ಪಡೀಲು ಅವರನ್ನು ಸರ್ವಾನುಮತದಲ್ಲಿ ಪಧಾದಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಾಲಿನಲ್ಲಿ ಸಂಘಟನೆ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಅಭಿವೃಧಿ ಕಾರ್ಯಗಳಲ್ಲಿ ಕೆಲಸ ಮಾಡುವ ಬಗ್ಗೆ  ಚರ್ಚಿಸಲಾಯಿತು.

ಗಣೇಶ್‌  ನೆಲ್ಲಿಗುಡ್ಡೆ ಸ್ವಾಗತಿಸಿ, ಗೋಪಾಲ ಪೂಜಾರಿ ಧನ್ಯವಾದವಿತ್ತರು.

Exit mobile version