Site icon Suddi Belthangady

ಮಡಂತ್ಯಾರು: ಗಾಯತ್ರಿನಗರ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ವೈಶ್ವಕರ್ಮಣ ಮಹಾಯಜ್ಞ

ಮಡಂತ್ಯಾರು: ಮಡಂತ್ಯಾರು ಗಾಯತ್ರಿನಗರ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ವೈಶ್ವಕರ್ಮಣ ಮಹಾಯಜ್ಞವು ಕನ್ಯಾ ಸಂಕ್ರಮಣದಂದು ಸೆ.16ರಂದು ಜರಗಿತು.

ಬಸವನಗುಡಿ ಗಾಯತ್ರಿ ನಗರದ ವಿಶ್ವಕರ್ಮ ಸಭಾಭವನದಲ್ಲಿ ವೈಶ್ವಕರ್ಮಣ ಮಹಾಯಜ್ಞವು ಬೆಳಗ್ಗೆ 9 ಗಂಟೆಗೆ ಪ್ರಕಾಶ್ ಪುರೋಹಿತ್ ವೇಣೂರು ಇವರ ಆಚಾರ್ಯತ್ವದಲ್ಲಿ ಜರಗಿತು.

ಗುರುವಾಯನಕೆರೆ ಅಧ್ಯಕ್ಷ ಬಿ.ಯೋಗೀಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ, ಪಣಕಜೆ ವಿಶ್ವಕಲಾ ಮಹಿಳಾ ಮಂಡಳಿ ಅಧ್ಯಕ್ಷೆ ವೇದಾವತಿ ಶ್ರೀಧರ ಆಚಾರ್ಯ ಪಾರೆಂಕಿ, ಕೋಶಾಧಿಕಾರಿ ಯಶೋಧರ ಆಚಾರ್ಯ ಮದ್ದಡ್ಕ ಮತ್ತು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Exit mobile version