Site icon Suddi Belthangady

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘ ವಾರ್ಷಿಕ ಮಹಾಸಭೆ- 317 ಕೋಟಿ ವ್ಯವಹಾರ, 1.52 ಕೋಟಿ ಲಾಭ, ಶೇ 12 ಡಿವಿಡೆಂಡ್ ಘೋಷಣೆ

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೆಪ್ಟೆಂಬರ್ 15ರಂದು ನೆರವೇರಿತು. ಈ ಸಂದರ್ಭದಲ್ಲಿ ಸಂಘವು 317 ಕೋಟಿ ವ್ಯವಹಾರ, 1.52 ಕೋಟಿ ಲಾಭ ಗಳಿಸಿರುವ ವರದಿ ನೀಡಿ, ಶೇ 12 ಡಿವಿಡೆಂಡ್ ಘೋಷಣೆ ಮಾಡಲಾಯಿತು.

ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕ ಕುಶಾಲಪ್ಪ ಗೌಡ, ಉಪಾಧ್ಯಕ್ಷ ರಾಜು ಕೆ, ನಿರ್ದೇಶಕರಾದ ಕೊರಗಪ್ಪ ಗೌಡ, ಧರ್ಮರಾಜ್ ಎ, ರತೀಶ್ ಬಿ, ತಾರಾ ಟಿ ಚಿಪ್ಳುo ಕರ್, ಗಂಗಾವತಿ, ಬೇಬಿ, ನಾಗೇಶ್ ಜಿ, ಕುಶಾಲಪ್ಪ ಗೌಡ, ಬೇಬಿ ಕಿರಣ್, ಮುರಳಿಧರ್ ಶೆಟ್ಟಿಗಾರ್, ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್, ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಟಿ. ರವಿಚಂದ್ರ ರಾವ್ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಸುಜಿತಾ ರೈ, ಸ್ವಾಗತವನ್ನು ರತೀಶ್ ಬಿ, ನಿರೂಪಣೆಯನ್ನು ಉಪಕಾರ್ಯದರ್ಶಿ ಹರಿಣಾಕ್ಷಿ ಡಿ, ವಾರ್ಷಿಕ ವರದಿಯನ್ನು ಸಿಇಒ ರವಿಚಂದ್ರ ರಾವ್ ನೆರವೇರಿಸಿದರು.

Exit mobile version