Site icon Suddi Belthangady

ಸೆಪ್ಟೆಂಬರ್ 15: ತುಮಕೂರು ಜಿಲ್ಲೆಯ ಕ್ಯಾತಸಂದ್ರಲ್ಲಿ ನಡೆಯುವ ಗಣಪತಿ ಶೋಭಯಾತ್ರೆಯಲ್ಲಿ ಭಾಗವಹಿಸಲಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ತಂಡ

ಬಳಂಜ: ಜಿಲ್ಲೆಯ ಹೆಸರಾಂತ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಇದೀಗ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗಣೇಶೋತ್ಸವದ ಅದ್ದೂರಿ ಶೋಭಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೆಪ್ಟೆಂಬರ್ 15ರಂದು ತೆರಳಲಿದೆ.

ಸಮಾಜ ಸೇವಕರಾದ ಹರೀಶ್ ವೈ ಚಂದ್ರಮರ ಪ್ರಧಾನ ಸಂಚಾಲಕತ್ವದಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಈಗಾಗಲೇ 236 ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು 8 ಜಿಲ್ಲೆ ಹಾಗೂ ಎರಡು ಹೊರ ರಾಜ್ಯದಲ್ಲಿ ಕುಣಿತ ಭಜನೆಯಲ್ಲಿ ಭಾಗವಹಿಸಿ ಹೆಸರನ್ನು ಪಡೆದಿದೆ.

ಇದರ ಜೊತೆಗೆ ಹಲವು ಜನಪರ ಸೇವೆಯನ್ನು ಸಹ ಮಾಡುತ್ತಾ ಬರುತ್ತಿದ್ದಾರೆ.ಪೋಷಕರು ಮತ್ತು ಮಂಡಳಿಯ ಸದಸ್ಯರ ಪೂರ್ಣ ಸಹಕಾರದಿಂದ ಇಷ್ಟು ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಿದೆ ಎಂದು ಹರೀಶ್ ವೈ.ಚಂದ್ರಮ ಸಂತಸ ವ್ಯಕ್ತಪಡಿಸಿದ್ದು ಮಂಡಳಿಯ ಮುಖ್ಯ ತರಬೇತುದಾರರಾಗಿ ಕು.ಮಾನ್ಯ ಹಾಗೂ ಅಧ್ಯಕ್ಷರಾಗಿ ಕು.ಜ್ಯೋತಿ, ಉಪ ಸಂಚಾಲಕರಾಗಿ ಪ್ರಣಾಮ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version