Site icon Suddi Belthangady

ಉಜಿರೆ: ಎಸ್.ಡಿ.ಎಂ. ಪಿ.ಯು. ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಂದ ಕೈಗಾರಿಕಾ ಪ್ರದೇಶಗಳ ಭೇಟಿ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿಯ ಟಿ.ಬಿ.ಕ್ರಾಸ್ ಬಳಿ ಇರುವ ಎನ್.ಎನ್. ಬಾಟ್ಲಿಂಗ್ ಕಂಪನಿ, ಹಳೆಕೋಟೆಯ ವಿನಾಯಕ ರೈಸ್ ಇಂಡಸ್ಟೀಸ್ ಮತ್ತು ನಿಡ್ಲೆಯ ಎಗ್ರೀ ಲೀಫ್ ಕಂಪನಿಗಳಿಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳು ಕಂಪನಿಯಲ್ಲಿ ತಯಾರಾಗುವ ತಂಪು ಪಾನೀಯ, ಅಕ್ಕಿ ಹಾಗೂ ಹಾಳೆತಟ್ಟೆಗಳ ತಯಾರಿ, ಸಾಗಾಣಿಕೆ ಹಾಗೂ ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರಾಂಶುಪಾಲ ಪ್ರಮೋದ್ ಕುಮಾರ್ ಶುಭ ಹಾರೈಸಿದರು. ವಾಣಿಜ್ಯ ಶಾಸ್ತ್ರ ವಿಭಾಗಗಳ ಉಪನ್ಯಾಸಕರು ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಸಹಕರಿಸಿದರು.

Exit mobile version