Site icon Suddi Belthangady

ಶಿಬಾಜೆ: ಜಮಾಬಂದಿ ಕಾರ್ಯಕ್ರಮ ಮುಂದೂಡಿಕೆ- ತಡವಾಗಿ ಬಂದ ಅಧಿಕಾರಿಗಳು- ಆಕ್ರೋಶಗೊಂಡ ಗ್ರಾಮಸ್ಥರು

ಶಿಬಾಜೆ: ಶಿಬಾಜೆ ಗ್ರಾಮ ಪಂಚಾಯತ್ ನಲ್ಲಿ ಸೆ.13ರಂದು ಜಮಾಬಂದಿ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದ ನೋಡಲ್ ಅಧಿಕಾರಿ ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ರಂಜಿತ್ ರವರು ತಡವಾಗಿ ಆಗಮಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಜಮಾಬಂದಿ ಕಾರ್ಯಕ್ರಮ ಮುಂದೂಡುವಂತೆ ಒತ್ತಾಯಿಸಿದರು.ಅದರಂತೆ ಮುಂದೂಡಲಾಗಿದ್ದು, ದಿನಾಂಕ ಇನ್ನಷ್ಟೇ ನಿಗದಿ ಪಡಿಸಬೇಕಾಗಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ದಿನಕರ್ ಕುರುಪ್, ಸದಸ್ಯರಾದ ರತೀಶ್ ಬಿ, ವಿನಯಚಂದ್ರ ಟಿ, ವನಿತಾ ಬಿ ಶೆಟ್ಟಿಗಾರ್, ಪಂ.ಅಭಿವೃದ್ಧಿ ಅಧಿಕಾರಿ ಜಯರಾಜ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version