Site icon Suddi Belthangady

ಬೆಳಾಲು: ಸಂಜೀವಿನಿ ಒಕ್ಕೂಟದಿಂದ ತರಕಾರಿ ಉತ್ಪಾದಕರ ಗುಂಪು ರಚನೆ

ಬೆಳಾಲು: ಬೆಳಾಲು ನಾಗಾಂಬಿಕಾ ಸಂಜೀವಿನಿ ಒಕ್ಕೂಟದ ವತಿಯಿಂದ ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ತರಕಾರಿ ಉತ್ಪಾದಕರ ಗುಂಪು ರಚನೆಯನ್ನು ಸೆ.12ರಂದು ಮಾಡಲಾಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಉದ್ಘಾಟಿಸಿದರು. ಬ್ಲಾಕ್ ಮ್ಯಾನೇಜರ್ ನಿತೀಶ್ ಉತ್ಪಾದಕರ ಗುಂಪನ್ನು ಮುನ್ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ರೀತಿಯ ತರಕಾರಿ, ಇನ್ನಿತರ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ, ಒಕ್ಕೂಟದ ಅಧ್ಯಕ್ಷೆ ಮಧುರ, ಪದಾಧಿಕಾರಿಗಳು, ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಎಂಬಿಕೆ ಹರಿಣಾಕ್ಷಿ ಸ್ವಾಗತಿಸಿದರು.

Exit mobile version