Site icon Suddi Belthangady

ಕೊಕ್ಕಡ ಜೆಸಿಐ ಕಪಿಲ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಕೊಕ್ಕಡ ಗ್ರಾ.ಪಂ. ಸ್ವಚ್ಛತಾ ಸಂಕೀರ್ಣಕ್ಕೆ ಭೇಟಿ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ 3ನೇ ದಿನದಂದು ಕೊಕ್ಕಡ ಗ್ರಾ.ಪಂ. ಸ್ವಚ್ಛತಾ ಸಂಕೀರ್ಣಕ್ಕೆ ಭೇಟಿ ನೀಡಲಾಯಿತು. ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐನ ಅಧ್ಯಕ್ಷರು ಜೆಸಿ ಸಂತೋಷ್ ಜೈನ್, ನಿಕಟ ಪೂರ್ವ ಅಧ್ಯಕ್ಷ ಜೆಸಿ ಜಿತೇಸ್‌ ಎಲ್‌ ಪಿರೇರಾ, ಪೂರ್ವ ಅಧ್ಯಕ್ಷರು ಜೆಸಿ ಕೆ ಶ್ರೀಧರ್ ರಾವ್, ಕಾರ್ಯದರ್ಶಿ ಜೆಸಿ ಅಕ್ಷತ್ ರೈ ಜೆಸಿ ಮಾರ್ಗದರ್ಶಕರು ಜೋಸೆಫ್ ಪಿರೇರ, ಜೆಸಿ ಜೆಸಿಂತಾ ಡಿಸೋಜಾ, ಜೆಸಿ ರಾಜ ರಾಮ ಸಂಗಮ ನಗರ, ಧನುಷ್ ಜೈನ್‌, ಕೊಕ್ಕಡ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷರು ಪ್ರಭಾಕರ ಗೌಡ, ಸದಸ್ಯರು ಜಗದೀಶ್‌ ಪೂಜಾರಿ (ಸ್ವಚ್ಛತಾ ಸಮಿತಿ ಉಸ್ತುವಾರಿ), ಸಿಬ್ಬಂದಿಗಳಾದ ವಿಮಲಾ, ಗೀತಾ, ಮೀನಾ, ಸಾವಿತ್ರಿ, ಕೃಷಿ ಸಖಿ ನವ್ಯ, ಪಶು ಸಖಿ ದೀಪಿಕಾ, ಸಂಜೀವಿನಿ ಒಕ್ಕೂಟ ಅಧ್ಯಕ್ಷರು ಕುಸುಮ, ಸದಸ್ಯರು ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version