Site icon Suddi Belthangady

ನಿಡ್ಲೆ: ಸಹಕಾರ ಸಂಘದ ಮಹಾಸಭೆ: ರೂ.219ಕೋಟಿ ವ್ಯವಹಾರ, ರೂ.69.51 ಲಕ್ಷ ಲಾಭ, ಶೇ.10 ಡಿವಿಡೆಂಡ್ ಘೋಷಣೆ

ನಿಡ್ಲೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ ಸೆ.10ರಂದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ರಮೇಶ್ ರಾವ್.ಕೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘವು 2023-24ನೇ ಸಾಲಿನಲ್ಲಿ ಸಂಘವು 219 ಕೋಟಿ ವ್ಯವಹಾರ ನಡೆಸಿದ್ದು, ರೂ.69,51,663 ನಿವ್ವಳ ಲಾಭಗಳಿಸಿದೆ.ಸಂಘದ ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್ ಘೋಷಣೆ ಮಾಡಿದರು.

ಸಂಘದ ಅಧ್ಯಕ್ಷ ರಮೇಶ್ ರಾವ್.ಕೆ ವರದಿ ವಾಚಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಪಿ ಲೆಕ್ಕಪತ್ರಗಳನ್ನು ಮಂಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ನಿರ್ದೇಶಕರಾದ ಅಶೋಕ್ ಭಟ್, ಡೀಕಯ್ಯ ಯಂ.ಕೆ, ನಿತ್ಯಾನಂದ ರೈ ಟಿ.ಎಸ್, ನಾರಾಯಣ.ಕೆ, ಐಶ್ವರ್ಯ ಶೆಟ್ಟಿ ಜೆ, ಕೆಂಪಯ್ಯ ಗೌಡ ಎನ್, ರಾಜು, ವಲಯ ಮೇಲ್ವಿಚಾರಕ ಸಿರಾಜುದ್ದೀನ್, ಪದ್ಮನಾಭ.ಕೆ, ಸಂಘದ ನಿರ್ದೇಶಕಿ ವಿಜಯಲಕ್ಷ್ಮಿ ಸ್ವಾಗತಿಸಿ, ನಿರ್ದೇಶಕ ಸಬಾಸ್ಟಿನ್ ಪಿ.ಟಿ ಧನ್ಯವಾದವಿತ್ತರು.

Exit mobile version