Site icon Suddi Belthangady

ಕಲ್ಮಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಲ್ಮಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಲ್ಮಂಜ ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸಪ್ಟೆಂಬರ್ 7ರಂದು ಸ.ಹಿ.ಪ್ರಾಥಮಿಕ ಶಾಲೆ ಸಿದ್ಧಬೈಲುನಲ್ಲಿ ನಡೆಯಿತು.

ಸಂಜೆ 7 ಗಂಟೆಗೆ ಶ್ರೀ ಸದಾಶೀವೇಶ್ವರ ಭಜನಾ ತಂಡ ಸತ್ಯನಪಲ್ಕೆ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.ಬೆಳಗ್ಗೆ ಸಮಿತಿ ಸದಸ್ಯರ ಸಮ್ಮುಖದಲ್ಲಿ ಗಣಹೋಮ ನಡೆಯಿತು ನಂತರ ಅಟೋಟ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ಮೋಹಿನಿ ಕೆ. ಸಿ.ಆರ್.ಪಿ.ಎಫ್ ಹಾಗೂ ರುಕ್ಮಯ್ಯ ಗೌಡ ಕರಿಯನೆಲ ನಿವೃತ್ತ ಯೋಧರು ಇವರ ಸಮ್ಮುಖದಲ್ಲಿ ನಡೆಯಿತು.

ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಅದ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಲೋಹಿತ್ ಯಂ ವಹಿಸಿದ್ದರು.

ಧಾರ್ಮಿಕ ಉಪನ್ಯಾಸಕರಾಗಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಡ್ಯ ಸಹಪ್ರಾಧ್ಯಾಪಕರು ಮತ್ತು ಸಂಯೋಜಕರು ಸ್ನಾತಕೋತ್ತರ ವಿಭಾಗದ ಡಾ.ರವಿ ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕರು ಸಂತೋಷ್ ಕುಮಾರ್ ಅತ್ತಾಜೆ, ಕಲ್ಮಂಜ ಬಜರಂಗದಳ ಸಹ ಸಂಚಾಲಕ ಮುರಳೀಧರ ಗೌಡ, ಕಲ್ಮಂಜ ಸಿದ್ಧಬೈಲು ಪರಾರಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಗೌಡ ಮೂಡಾಯಿಬೆಟ್ಟು ಆಗಮಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ ಕಲ್ಮಂಜ, ಅದಿತಿ ಚಿಪ್ಲೊಣ್ಕರ್ ಹಾಗೂ ಹಂಸಿನಿ ಭಿಡೆ ಅವರನ್ನು ಸನ್ಮಾನಿಸಲಾಯಿತು.ಅನಿಲ್ ಮದ್ಮಲ್ಕಟ್ಟೆ ಸ್ವಾಗತಿಸಿ, ಸಾಂತಪ್ಪ ಯಂ ಮದ್ಮಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Exit mobile version