Site icon Suddi Belthangady

ಸೌತಡ್ಕದಲ್ಲಿ ಸಾಮೂಹಿಕ ಗಣಪತಿ ಯೋಗ ನಮಸ್ಕಾರ

ಕೊಕ್ಕಡ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸಾಮೂಹಿಕ ಗಣಪತಿ ಯೋಗ ನಮಸ್ಕಾರ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸಂಚಾಲಕ ನಾರಾಯಣ, ದೇವಸ್ಥಾನದ ಸ್ವಯಂಸೇವಕ ಸಮಿತಿಯ ಶಿವಾನಂದ್ ಸಂಕೇಶ, ಯೋಗ ಶಿಕ್ಷಕರಾದ ಡಾ.ಗೋವಿಂದ ಕಜೆ, ರವಿಚಂದ್ರ, ದೀಪ್ತಿ ದೀಪ ಬೆಳಗಿಸಿ ಶುಭ ಹಾರೈಸಿದರು.ಯೋಗ ಶಿಕ್ಷಕ ಶೀನಪ್ಪ ಬೌದ್ಧಿಕ್ ನೆರವೇರಿಸಿದರು.

ಯೋಗ ಬಂಧುಗಳಾದ ಸುಲತ, ಸುಧಾ ಮತ್ತು ವನಿತ ಭಜನೆ, ಸುಪ್ರೀತಾ ಅಮೃತವಚನ, ಪ್ರಸಾದ್, ಹೇಮಾವತಿ ಪಂಚಾಂಗ ಪಠಣ ಮಾಡಿದರು. ತಾಲೂಕು ಸಹ ಶಿಕ್ಷಣ ಸಂಚಾಲಕ ಕೃಷ್ಣಪ್ಪ ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ ಮತ್ತು ಯೋಗ ಶಿಕ್ಷಕ ಅಭಿಷೇಕ್ ಸಾಮೂಹಿಕ ಗಣಪತಿ ನಮಸ್ಕಾರ. ತಾಲೂಕು ಶಿಕ್ಷಣ ಪ್ರಮುಖ ಪ್ರದೀಪ್ ಧ್ಯಾನ ಕಾರ್ಯಕ್ರಮ ನೆರವೇರಿಸಿದರು.

ಶಿವಪ್ರಸಾದ್, ಆಕಾಶ್ ಮತ್ತು ಭಾರತಿ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಉಪ್ಪಿನಂಗಡಿ, ಕೊಯಿಲ, ಅಲಂಕಾರು, ನೆಲ್ಯಾಡಿ ಭಾಗದ ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಯೋಗಬಂಧುಗಳಾದ ಶರ್ಮಿಳ,ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಮಾರ್ಗದರ್ಶಕ ಆನಂದ ಕುಂಟಿನಿ ಸೂಚನೆ ನೀಡಿದರು. ಗಣೇಶ ರಶ್ಮಿ ವಂದಿಸಿದರು.

Exit mobile version