Site icon Suddi Belthangady

ಪದ್ಮುಂಜದಲ್ಲಿ ಅಜ್ಮೀರ್ ಮೌಲೀದ್ ಮಜ್ಲಿಸ್

ಪದ್ಮುಂಜ: ಖಲಂದರ್ ಷಾ.ಜುಮ್ಮಾ ಮಸೀದಿಯಲ್ಲಿ ಎಸ್ ವೈ ಎಸ್ ವತಿಯಿಂದ ವಾರ್ಷಿಕ ಅಜ್ಮೀರ್ ಮೌಲೀದ್ ಮಜ್ಲಿಸ್ ಎಸ್ ವೈ ಎಸ್ ಅಧ್ಯಕ್ಷ ನಝೀರ್ ರವರ ಅಧ್ಯಕ್ಷತೆಯಲ್ಲಿ ಸೆ.7ರಂದು ಪದ್ಮುಂಜದಲ್ಲಿ ಜರಗಿತು. ಮುಖ್ಯ ಪ್ರಭಾಷಣ ನಡೆಸಿದ ಸೈಯದ್ ಅಬ್ದುರ್ರಹ್ಮಾನ್ ಮಸ್ ಊದ್ ತಂಙಳ್ ಅಝ್ಹರಿಯವರು ಅಲ್ಲಾಹು ಮತ್ತು ಅವನ ಪ್ರವಾದಿ ತೋರಿಸಿಕೊಟ್ಟ ಹಾದಿಯನ್ನು ದಿಕ್ಕರಿಸಿ ನಡೆದರೆ ನಮಗರಿಯದಂತೆ ಅನಾಹುತಗಳು ಕಷ್ಟ ನಷ್ಟಗಳು ಎದುರಾಗುತ್ತದೆ ಎಂದರು.

ಸ್ಥಳೀಯ ಖತೀಬ್ ಉಸ್ತಾದ್ ಯಾಸಿರ್ ಹುಮೈದಿ ಯವರು ಕಾರ್ಯಕ್ರಮ ಉದ್ಘಾಟಿಸಿದರು.ಅಬ್ದುರಶೀದ್ ಅಲ್ ಹಿಕಮಿ ಉಸ್ತಾದರು ಅಜ್ಮೀರ್ ಮೌಲೀದ್ ನಡೆಸಿಕೊಟ್ಟರು.

ಜಮಾಅತ್ ಅಧ್ಯಕ್ಷ ರಫೀಕ್ ಅಂತರ, ಪ್ರ.ಕಾರ್ಯದರ್ಶಿ ಕಾಸಿಂ ಪದ್ಮುಂಜ, ಕೋಶಾಧಿಕಾರಿ ಇಸುಬು ಹಾಜಿ, ಎಸ್ ವೈ ಎಸ್ ಝೋನ್ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಪದ್ಮುಂಜ, ಎಸ್ ವೈ ಎಸ್ ಯುನಿಟ್ ಕಾರ್ಯದರ್ಶಿ ಅಶ್ರಫ್ ಪದ್ಮುಂಜ, ಕೋಶಾಧಿಕಾರಿ ರಮ್ಲಾನ್ ಮಲೆಂಗಲ್ಲು, ಸೈಫುದ್ದೀನ್ ಹಾಸಿಮಿ ಪದ್ಮುಂಜ, ನಾಫೀಹ್ ಹಾಸಿಮಿ ಪದ್ಮುಂಜ, ಫಾರೂಖ್ ಸ ಅದಿ ಪದ್ಮುಂಜ, ದಾನಿಗಳಾದ ಕೆರೀಂ ನಿನ್ನಿಕಲ್ಲು,
ಉಪಸ್ಥಿತರಿದ್ದರು.

ಎಸ್ ವೈ ಎಸ್ ನಾಯಕ ಅಬ್ದುಲ್ ರಾಶಿದ್ ಸಅದಿ ಪದ್ಮುಂಜ ರವರು ಸ್ವಾಗತಿಸಿ, ಅಬ್ದುರ್ರಹ್ಮಾನ್ ರವರು ಧನ್ಯವಾದ ಸಲ್ಲಿಸಿದರು.

Exit mobile version