Site icon Suddi Belthangady

ಅಪ್ಪೆಲ ಶ್ರೀ ಉಮಾಪಂಚಲಿಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ

ನೆರಿಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಪ್ಪೆಲ ನೆರಿಯ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಪ್ಪೆಲ ಉಮಾಪಂಚಲಿಗೇಶ್ವರ ದೇವಸ್ಥಾನದಲ್ಲಿ ಸೆ.7ರಂದು ನಡೆಯಿತು.

ಬೆಳ್ಳಿಗೆ 6 ಗಂಟೆಗೆ ಗಣಹೋಮ ವಿಗ್ರಹ ಪ್ರತಿಷ್ಠೆ, ಉಷ:ಪೂಜೆ ಸಾರ್ವಜನಿಕ ಭಜನೆ ಹಾಗೂ ಸಂಜೀವ ಗೌಡ ಮಾಕಳ ಅಧ್ಯಕ್ಷೇಯಲ್ಲಿ ದಾರ್ಮಿಕ ಸಭೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಸನಾತನ ಸಂಸ್ಥೆಯ ಸಾಧಕ ಆನಂದ ಗೌಡ ಬಯಲಂಗಡಿ ಸೋಮನಾಧೇಶ್ವರ ದೇವಸ್ಧಾನದ ಸಮಿತಿ ಮಾಜಿ ಅಧ್ಯಕ್ಷ ಕಮಲಾಕ್ಷ ಪೂಜಾರಿ, ಅಣ್ಣು ಗೌಡ ಕೊಡ್ಲೆ ಉಪಸ್ಥಿತರಿದ್ದರು.

ನವೀನ್ ನೆರಿಯ ಪ್ರಸ್ಧಾವಿಕವಾಗಿ ನುಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಎಸ್ ವಾರ್ಷಿಕ ವರದಿ ಮಂಡಿಸಿದರು ಪುಪ್ಪ ಬಾಂದಡ್ಕ ಸ್ವಾಗತಿಸಿ, ಪ್ರಶಾಂತ್ ಅಣಿಯೂರು ವಂದಿಸಿದರು.

ಶಾಲಾ ಮಕ್ಕಳ ಹಾಗೂ ಊರಿನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, ಸಂಜೆ 6 ಗಂಟೆಗೆ ಮಹಾ ಪೂಜೆ ನಡೆದು ಶೋಭಾಯಾತ್ರೆ ನಡೆಯಿತು.

Exit mobile version