Site icon Suddi Belthangady

ಕೊಯ್ಯೂರು: ದೆಂತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಳದ ಶಿಲಾನ್ಯಾಸ ಕಾರ್ಯಕ್ರಮ

ಕೊಯ್ಯೂರು: ಕೊಯ್ಯೂರು ಗ್ರಾಮದ ದೇಂತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸೆ.6ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿ ನೀಲೇಶ್ವರ ಅರವತ್ತ್ ಇವರ ನೇತೃತ್ವದಲ್ಲಿ ಧಾರ್ಮಿಕ ವೈದಿಕ ವಿಧಿವಿಧಾನಗಳ ಜೊತೆಗೆ ದೇವಳದ ಕಾರ್ಯಕ್ರಮ ನೆರವೇರಿತು.

ದೇವರಿಗೆ ವಿಶೇಷ ಪೂಜೆ ದ್ವಾದಶಮೂರ್ತಿ ಆರಾಧನೆ, ಅನ್ನಸಂತರ್ಪಣೆ, ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಿತು.ಅನುವಂಶಿಕ ಆಡಳಿತ ಮೊಕ್ತಸರರು, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಸರ್ವ -ಸದಸ್ಯರು ಜೀರ್ಣೋದ್ದಾರ ಸಮಿತಿ, ದೇವಳದ ಪ್ರಧಾನ ಅರ್ಚಕರು, ಗಣ್ಯರು, ಊರ ಸಮಸ್ತ ಭಕ್ತರು ಉಪಸ್ಥಿತರಿದ್ದರು.

Exit mobile version