Site icon Suddi Belthangady

ವೇಣೂರು: ಕುಂಭಶ್ರೀ ಮೈದಾನದಲ್ಲಿ ನಾರಾವಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ವೇಣೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕುಂಭಶ್ರೀ ವಸತಿ ಶಾಲೆ ಮತ್ತು ಕಾಲೇಜು ಇವರ ಸಹಭಾಗಿತ್ವದಲ್ಲಿ ನಾರಾವಿ ವಲಯಮಟ್ಟದ ಕಬಡ್ಡಿ ಪಂದ್ಯಾಟ ಸೆ.3ರಂದು ನಿಟ್ಟಡೆ ಕುಂಭಶ್ರೀ ಮೈದಾನದಲ್ಲಿ ನಡೆಯಿತು.

ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕ ಗಿರೀಶ್ ವಹಿಸಿದ್ದರು. ಸಂಸ್ಥೆಯ ಪ್ರಿನ್ಸಿಪಾಲ್ ಅಶ್ವತ್ ಮುಖ್ಯ ಅಥಿತಿಯಾಗಿ ಭಾಗವಹಿಸಿ ಶುಭಹಾರೈಸಿದರು.

ಸಿ ಆರ್.ಪಿ. ಆರತಿ, ಹರೀಶ್ ನಾಯಕ್ ಗಾಂಧಿನಗರ, ಅನಿತಾ ಪಾನೂರು, ಸತೀಶ್ ಚಿಗುರು, ನೋಡಲ್ ಅಧಿಕಾರಿ ಶೇಖರ್ ಎನ್, ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಉದ್ಯಮಿ ಫಾರೂಕ್ ಕುಕ್ಕೇಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ, ಸುಜಾತ ವೇದಿಕೆಯಲ್ಲಿದ್ದರು. ಪ್ರಮುಖರಾದ ದೇಜಪ್ಪ ಶೆಟ್ಟಿ, ಅರವಿಂದ ಶೆಟ್ಟಿ, ಪ್ರಮೋಧ್ ಶೆಟ್ಟಿ, ಇಸ್ಮಾಯಿಲ್ ಕೆ.ಪೆರಿಂಜೆ ಉಪಸ್ಥಿತರಿದ್ದರು.

Exit mobile version