Site icon Suddi Belthangady

ಬಳ್ಳಮಂಜ: ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ. ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಮಚ್ಚಿನ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಾಗು ಎಲ್ಲಾ ಸುತ್ತಮುತ್ತಲಿನ ಪುಟಾಣಿಗಳಿಗೂ ಮುದ್ದು ಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸಮಾರಂಭವನ್ನು ಅನಂತೇಶ್ವರ ಸ್ವಾಮಿ ದೇವಸ್ಥನದ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯರವರು ದೀಪಬೆಳಗಿಸುವ ಮೂಲಕ ಶುಭ ಹಾರೈಸಿದರು ಹಾಗು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಥಮ, ದ್ವಿತೀಯ ಬಹುಮಾನ ಹಾಗು ಉಳಿದ ಸ್ಪರ್ಧಿಗಳಿಗು ಸಹ ಬಹುಮಾನಗಳನ್ನು ನೀಡಲಾಯಿತು. ತೀರ್ಪುಗಾರರಾಗಿ ದೀಪಾ, ಮಂಜುಳ ಹಾಗು ಯತೀಶ್ ರೈ ಭಾಗವಹಿಸಿದರು. ಬಹುಮಾನ ವಿತರಣೆಯನ್ನು ನೂ ಫ್ರೆಂಡ್ಸ್ ಕ್ಲಬ್‌ನ ನಾರಾಯಣ ಪೂಜಾರಿ ಮತ್ತು ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ಪ್ರಮೋದ್ ಕುಮಾರ್ ನೆರೆವೇರಿಸಿದರು.

ಹರ್ಷ ಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು.ಪೋಷಕರು ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿ ಯಶಸ್ವಿಗೊಳಿಸಿದರು.

Exit mobile version