Site icon Suddi Belthangady

ಕುತ್ಲೂರು: ನೆಲ್ಯಪಲ್ಕೆ ಜನಹಿತ ಬಳಗ ವತಿಯಿಂದ 24ನೇ ವರ್ಷದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವ

ಕುತ್ಲೂರು: ನೆಲ್ಯಪಲ್ಕೆ ಜನಹಿತ ಬಳಗ ಇದರ ವತಿಯಿಂದ ನಡೆದ 24ನೇ ವರ್ಷದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವ, ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ನೆರವೇರಿಸುವುದರ ಮುಖಾಂತರ ಶಿವಶಕ್ತಿ ಪ್ರೆಂಡ್ಸ್ ಕ್ಲಬ್ ಸಹಕಾರದಿಂದ ವಿಜೃಂಭಣೆಯಿಂದ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಜನಹಿತ ಬಳಗದ ಅಧ್ಯಕ್ಷ ಕರಿಯ ಪೂಜಾರಿ ದರ್ಕಾಸು, ಮುಖ್ಯ ಅತಿಥಿಯಾಗಿ ಗ್ರಾ.ಪಂ. ಅಧ್ಯಕ್ಷ ರಾಜವರ್ಮ ಜೈನ್ ಅವರ ಉಪಸ್ಥಿತಿಯಲ್ಲಿ ಹಾಗೂ ಜನಜಾಗೃತಿ ವೇದಿಕೆ ವಲಯದ ಅಧ್ಯಕ್ಷ ರತ್ನಾಕರ್ ಬಡೆಕ್ಕಳ, ಪಂಚಾಯಿತಿ ಸದಸ್ಯ ಸಂತೋಷ್ ಮರ್ದೊಟ್ಟು, ಮಾಜಿ ಸದಸ್ಯ ಕೃಷ್ಣಪ್ಪ ಪೂಜಾರಿ, ಶಿವಶಕ್ತಿ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ರೂಪೇಶ್ ಇವರ ಉಪಸ್ಥಿತಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮದ ಹಿರಿಯ ಮೊಂಟ ಪೂಜಾರಿ ಪೋಸಲಾಯಿ ಇವರನ್ನು ಸನ್ಮಾನಿಸಲಾಯಿತು.

ರಾಜೇಶ್ ಮರ್ದೊಟ್ಟು, ಸತೀಶ್, ಕೇಶವ ಪರನೀರು ನಿರೂಪಿಸಿ, ಗಣೇಶ್ ನೆಲ್ಯಪಲ್ಕೆ ವಂದನಾರ್ಪಣೆಗೈದರು.

Exit mobile version