Site icon Suddi Belthangady

ಸವಣಾಲಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ಸಮಸ್ಯೆ ಬಗ್ಗೆ ಈ ಹಿಂದೆ ವರದಿ ಮಾಡಿದ್ದ ಸುದ್ದಿ: ಗ್ರಾಮಸ್ಥರ ಆತಂಕ ದೂರ

ಸವಣಾಲು: ಇಲ್ಲಿನ ಸುತ್ತಮುತ್ತ ಪ್ರದೇಶಗಳಲ್ಲಿ ಚಿರತೆ ಹಾವಳಿಯಿಂದಾಗಿ ಜನರು‌ ಆತಂಕಗೊಂಡಿದ್ದ ವರದಿಯನ್ನು ಸುದ್ದಿ ನ್ಯೂಸ್ ಈ ಹಿಂದೆ ಮಾಡಿತ್ತು. ಅರಣ್ಯ ಇಲಾಖೆ ಇಟ್ಟ ಬೋನಿಗೆ ತಿಂಗಳುಗಳ ನಂತರ ಚಿರತೆ ಬಂದು ಬಿದ್ದಿದೆ.‌ಬೋನಿನಲ್ಲಿಟ್ಟ ಕೋಳಿ ಬೇಟೆಗೆ ಬಂದ ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆಯವರು ಬೋನಿಗೆ ಬಿದ್ದ ಚಿರತೆಯ‌ನ್ನು ತೆಗೆದುಕೊಂಡು ಹೋಗಿದ್ದಾರೆ.

ಸಾರ್ವಜನಿಕರು ಅರಣ್ಯ ಇಲಾಖೆಯ ಮುತುವರ್ಜಿಗೆ ಮತ್ತು ಸುದ್ದಿ ಅಂದು ಮಾಡಿರುವ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಆತಂಕ ದೂರವಾಗಿದೆ.

Exit mobile version