Site icon Suddi Belthangady

ಬುರೂಜ್ ಶಾಲೆಯಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆ

ಪುಂಜಾಲಕಟ್ಟೆ: ಮೂಡುಪಡುಕೋಡಿ, ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಸಂಭ್ರಮ, ಸಡಗರದಿಂದ ಇತ್ತೀಚೆಗೆ ಶಾಲಾ ಆವರಣದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಎಲ್ ಕೆ ಜಿ, ಯು ಕೆ ಜಿ ಹಾಗೂ ಒಂದನೆಯ ತರಗತಿ ಪುಟಾಣಿಗಳು ರಾಧೆ – ಕೃಷ್ಣರಾಗಿ ವರ್ಣರಂಜಿತ ಪೋಷಾಕಿನಲ್ಲಿ ಮಿಂಚಿ, ಎಲ್ಲರನ್ನೂ ರಂಜಿಸೋ ಮೂಲಕ ಪ್ರೇಕ್ಷಕರ ಮನ ಗೆದ್ದರು.ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯೋಪಾಧ್ಯಾಯಿನಿ ಜಯಶ್ರೀ ಬಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಶಿಕ್ಷಕಿಯರಾದ ವನಿತಾ ಶೆಟ್ಟಿ, ಖುರ್ಷಿದ್, ಅನ್ನಪೂರ್ಣೇಶ್ವರಿ ರಿಫಾನ, ತೃಪ್ತಿ ಇವರುಗಳ ಪ್ರೇರಣೆಯಿಂದ ಶಾಲಾ ಅವರಣವೆಲ್ಲಾ ಕೃಷ್ಣಾ ಜನ್ಮಾಷ್ಟಮಿಯ ಸಂಭ್ರಮ ಕಲೆಗಟ್ಟಿತ್ತು.

Exit mobile version