Site icon Suddi Belthangady

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಆರಾಧನೆ- ಕ್ಷೀರಾಭಿಷೇಕ, ಗಂಧ ಅಭಿಷೇಕ ಹಾಗೂ ವಿಶೇಷ ಪೂಜೆ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಸಂಪತ್ ಶುಕ್ರವಾರ ಪ್ರಯುಕ್ತ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ, ಗಂಧ ಅಭಿಷೇಕ, ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಶ್ರೀ ಸರ್ವಾಹ್ನ ಯಕ್ಷ ಆರಾಧನೆಯನ್ನು ಅಳದಂಗಡಿಯ ಪ್ರತಿಷ್ಠಾಪರೋಹಿತರಾದ ಶ್ರೀ ಪದ್ಮ ಪ್ರಭ ಇಂದ್ರರು, ಶ್ರೀ ಅರಹಂತ ಇಂದ್ರ, ಶ್ರೀ ಶ್ರೀಕೀರ್ತಿ ಇಂದ್ರ ಇನ್ನಿತರ ಪುರೋಹಿತರ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಲೋಕ ಕಲ್ಯಾಣರ್ಥವಾಗಿ ಮಾಡಿದ ಆರಾಧನೆ ಪೂಜಾ ಕರ್ತೃಗಳಾಗಿ ನಾರಾವಿ ಮೇಲoಟೆ ಗುತ್ತು ಪ್ರೇಮ ನಿಲಯದ ಪ್ರೇಮ ಕಲಾ ಭಾಗವಹಿಸಿದ್ದರು.ಈ ಪುಣ್ಯ ಕಾರ್ಯದಲ್ಲಿ ಆಡಳಿತ ಮಂಡಳಿಯ ಡಾ.ಕೆ.ಜಯಕೀರ್ತಿ ಜೈನ್, ಹೆಚ್.ವಿಜಯಕುಮಾರ್, ಜಿನರಾಜ ಪೂವಣಿ, ಫಣಿರಾಜ್ ಜೈನ್ ಗುಣವರ್ಮ, ವೀರೇಂದ್ರ ಕುಮಾರ್ ಜಿತೇದ್ರ ಜೈನ್, ಪಿ.ಯನ್ ರವಿರಾಜ್ ಪರಪ್ಪು ಹಾಗೂ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.

Exit mobile version