Site icon Suddi Belthangady

ಕಳೆಂಜ: ಗ್ರಾಮ ಸಭೆಯಲ್ಲಿ ಮರಕಡ-ಮಿಯಾರು ರಸ್ತೆ ಕಾಮಗಾರಿ ಬಗ್ಗೆ ಚರ್ಚೆ- ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಮಾತನಾಡಿ ದುರಸ್ಥಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ಶಾಸಕರು

ಕಳೆಂಜ: ಮರಕಡ-ಮಿಯಾರು ರಸ್ತೆ ಅವ್ಯವಸ್ಥೆಯಿಂದ ಕೂಡಿದೆ ನಡೆದಾಡಲು ಆಗದ ಪರಿಸ್ಥಿತಿ ಗಾಡಿ ರಿಪೇರಿ ಮಾಡಿಸಲು ನಾವು ದುಡಿದ ದುಡ್ಡನ್ನೆಲ್ಲ ಸುರಿಯುವ ಪರಿಸ್ಥಿತಿ ಪಿಡಬ್ಲ್ಯೂಡಿ ಅಧಿಕಾರಿಗಳು ಬರುವವರೆಗೆ ಕಳೆಂಜ ಗ್ರಾಮ ಪಂಚಾಯತ್ ಗ್ರಾಮ ಸಭೆ ಮುಂದೂಡಬೇಕು ಅವರು ನಮಗೆ ಸರಿಯಾದ ಉತ್ತರ ನೀಡಿದ ಮೇಲೇನೆ ಇಲ್ಲಿಂದ ನಾವು ತೆರಳುವುದು ಎಂದು ಆಟೋ ಚಾಲಕರು, ಊರಿನವರು, ಗ್ರಾಮ ಸಭೆಯಲ್ಲಿ ಪಟ್ಟು ಹಿಡಿದು ಕುಳಿತಿದ್ದರು.

ಪಿಡಬ್ಲ್ಯೂಡಿ ಅಧಿಕಾರಿಗಳು ಕಾಲ್ ರಿಸೀವ್ ಮಾಡದೇ ಕಟ್ ಮಾಡುತ್ತಿದ್ದು ಆಟೋ ಚಾಲಕರು ಕೋಪಗೊಂಡು ಅವರು ಯಾವಾಗ ಬರುತ್ತಾರೋ ಅವತ್ತು ಮತ್ತೆ ಗ್ರಾಮಸಭೆ ನಡೆಸಬೇಕೆಂದು ಪಟ್ಟು ಹಿಡಿದಾಗ ಗ್ರಾ.ಪಂಚಾಯತ್ ಸದಸ್ಯ ಹರೀಶ್ ರವರು ಶಾಸಕರಿಗೆ ಕರೆ ಮಾಡಿ ಪರಿಸ್ಥಿತಿ ತಿಳಿಸಿದಾಗ ಪಿಡಬ್ಲ್ಯೂಡಿ ಇಲಾಖೆಯವರಿಗೆ ಪರಿಸ್ಥಿತಿ ಮನವರಿಕೆ ಮಾಡಿ ಒಂದು ವಾರದೊಳಗೆ ತಕ್ಕ ಮಟ್ಟಿಗೆ ಸರಿಪಡಿಸುವ ಭರವಸೆ ನೀಡಿದರು.

ಇದಕ್ಕೆ ಉತ್ತರಿಸಿದ ಗ್ರಾಮಸ್ಥ ಯೋಗೀಶ್ ರವರು ಶಾಸಕರ ಮೇಲೆ ಈ ವಿಚಾರವಾಗಿ ಒತ್ತಡ ಹಾಕುವುದು ಬೇಡ ಶಾಸಕರು ಮಾಡಿಕೊಡುತ್ತೇನೆ ಎಂದರೆ ಬೇರೆಯವರು ಮಾಡದ ಹಾಗೆ ಮಾಡಿ ಶಾಸಕರ ಹೆಸರು ಹಾಳುಮಾಡಲು ಪ್ರಯತ್ನಿಸುತ್ತಾರೆ ನಾವು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಒತ್ತಡ ಹಾಕಿಸಿ ರಸ್ತೆ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

Exit mobile version