Site icon Suddi Belthangady

ವೇಣೂರಿನಲ್ಲಿ ರಿಯಾಂತ್ ಎಲೆಕ್ಟ್ರಾನಿಕ್ಸ್ ನೂತನ ಶೋರೂಮ್ ಉದ್ಘಾಟನೆ

ವೇಣೂರು: ಇಲ್ಲಿಯ ಜಿನಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ರಿಯಾಂತ್ ಎಲೆಕ್ಟ್ರಾನಿಕ್ಸ್ ಸೇಲ್ಸ್ ಮತ್ತು ಸರ್ವಿಸ್ ಇದರ ನೂತನ ಶೋರೂಮ್ ಆ.28ರಂದು ಶುಭಾರಂಭಗೊಂಡಿತು.ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜಿನ ಪ್ರಸಾದ್ ಕಾಂಪ್ಲೆಕ್ಸ್ ಮಾಲಕಿ ಸರೋಜ ಜಿ.ಜೈನ್, ವೇಣೂರು ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ವಿ.ಪ್ರವೀಣ್ ಕುಮಾರ್ ಇಂದ್ರ, ವೇಣೂರು ನಮನ ಕ್ಲಿನಿಕ್ ಡಾ|ಶಾಂತಿಪ್ರಸಾದ್, ಉದ್ಯಮಿ ಭಾಸ್ಕರ ಪೈ, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಮಾ.ಪೀಟರ್ ಅರಾನ್ಹ, ಉಳ್ತುರು ಮಸೀದಿಯ ಬಾಅಲವಿ, ಸಯ್ಯದ್ ಅಬುದ್ರು ರಹ್ಮಾನ್ ಸಾದಾತ್ ತಂಜಳ್, ವೇಣೂರು ಜುಮ್ಮಾ ಮಸೀದಿಯ ಬದ್ರುದ್ದೀನ್ ಮದನಿ ಖತೀಬರು, ವೇಣೂರು ಅಲ್ ಮದೀನ ಮಸೀದಿಯ ಮಹಮ್ಮದ್ ಆಸ್ಕರ್ ಇಮಾಮ್, ವೇಣೂರು ರಾಮಾಂಜನೇಯ ಫೈನಾನ್ಸ್ ನ ಜಗದೀಶ್ಚಂದ್ರ ಡಿ.ಕೆ. ಮೊದಲದವರು ಭಾಗವಹಿಸಿ ಶುಭ ಹಾರೈಸಿದರು.

ಮಾಲಕ ಪ್ರಸಾದ್ ಜೈನ್ ಬಿ. ಆಗಮಿಸಿದ ಗಣ್ಯರನ್ನು, ಗ್ರಾಹಕರನ್ನು ಸ್ವಾಗತಿಸಿ ಗೌರವಿಸಿದರು.

Exit mobile version