Site icon Suddi Belthangady

ಮಚ್ಚಿನದಲ್ಲಿ ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಉದ್ಘಾಟನೆ

ಮಚ್ಚಿನ: ಸಂಸ್ಕಾರ ಸಹಕಾರ ಸಂಘಟನೆ ಸಮೃದ್ಧಿಯ ಧ್ಯೇಯದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹುಟ್ಟು ಹಾಕಿದ ಸಂಸ್ಥೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿಯನ್ನು ಮಚ್ಚಿನ ಗ್ರಾಮದಲ್ಲಿ ಸುಂದರ ಪೂಜಾರಿ ಅವರ ಕಟ್ಟಡದಲ್ಲಿ ಆ.29ರಂದು ಉದ್ಘಾಟನೆಗೊಂಡಿತು.

ಪ್ರಗತಿಪರ ಕೃಷಿಕ ಕೃಷ್ಣ ಪ್ರಭು ಮುದಲಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷರಾಗಿ ಮಚ್ಚಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾತನಾಡಿ ಒಂದೇ ಮನಸ್ಸಿನ ಸದಸ್ಯರು ಒಟ್ಟುಗೂಡಿ ಸಂಘವನ್ನು ರಚಿಸಿ ಉಳಿತಾಯ ಮಾಡಿ ಸಾಲವನ್ನು ಪಡೆದು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಪ್ರಮೋದ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರು ಶುಭಕರ, ಡಾ.ಮಾಧವ ಕೆ ಶೆಟ್ಟಿ ಬಳ್ಳಮಂಜ, ವಲಯದ ಸೇವಾ ದೀಕ್ಷಿತೆಯರಾದ ಜಯಮಾಲಾ, ಪುಷ್ಪವತಿ, ಶಶಿಕಲಾ, ಸರೋಜಿನಿ, ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ ಪ್ರಭು, ವಲಯ ಸಂಯೋಜಕಿ ಸುಮಿತ್ರ ಇವರು ಉಪಸ್ಥಿತರಿದ್ದರು.

ಹರೀಶ್ ಕುಮಾರ್ ಕಾರ್ಯಕಮ ನಿರೂಪಿಸಿದರು.ಪುರಂದರ ಸ್ವಾಗತಿಸಿದರು.ಮಚ್ಚಿನ ಗ್ರಾಮದ ಸೇವಾ ದೀಕ್ಷಿತೆ ಮಂಜುಳಾ ಶರ್ಮ ಧನ್ಯವಾದ ಕೋರಿದರು.

Exit mobile version