Site icon Suddi Belthangady

ಅರಸಿನಮಕ್ಕಿ: ಚೈತನ್ಯ ಮಿತ್ರ ಕಲಾ ವೃಂದ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ

ಅರಸಿನಮಕ್ಕಿ: ಚೈತನ್ಯ ಮಿತ್ರ ಕಲಾ ವೃಂದ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಆ.26ರಂದು ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆರಂಭವಾಯಿತು.

ಸ್ಪರ್ಧೆಗಳ ಉದ್ಘಾಟನೆಯನ್ನು ಪಂಚಾಯತ್ ಸದಸ್ಯರಾದ ಪ್ರೇಮಚಂದ್ರ ಮತ್ತು ಸೇವಾಪ್ರತಿನಿಧಿ ಯಮುನಾರವರು ನೆರವೇರಿಸಿದರು. ಸಾಯಂಕಾಲ ನಡೆದ ಬಹುಮಾನ ವಿತರಣೆ ಮತ್ತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೈತನ್ಯ ಮಿತ್ರ ಕಲಾ ವೃಂದದ ಅಧ್ಯಕ್ಷ ಗಣೇಶ್ ಕೆ ಹೊಸ್ತೋಟ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉದ್ಯಮಿಗಳಾದ ವಾಮನ ತಾಮನ್ಕರ್, ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ನವಶಕ್ತಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ವೃಶಾಂಕ್ ಖಾಡಿಲ್ಕರ್, ಪ್ರಾರ್ಥನೆಯನ್ನು ಧನಿಕ್ಷಾ, ನಿರೂಪಣೆಯನ್ನು ಧನ್ಯಶ್ರೀ, ಬಹುಮಾನ ಪಟ್ಟಿಯ ವರದಿಯನ್ನು ನಿತಾ ರಾಧೇಶ್ ಆಚಾರ್ಯ, ಧನ್ಯವಾದವನ್ನು ಶಶೀoದ್ರ ಆಚಾರ್ಯ ನೆರವೇರಿಸಿದರು.

Exit mobile version