Site icon Suddi Belthangady

ತೆಂಕಕಾರಂದೂರು: ಸಂತಾನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಾಲಕೃಷ್ಣ ಸ್ಪರ್ಧೆ

ತೆಂಕಕಾರಂದೂರು: ಸಂತಾನ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಖಂಡಿಗ 13ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಐದು ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಿದ ಬಾಲಕೃಷ್ಣ ಸ್ಪರ್ಧೆಯಲ್ಲಿ ಸುಮಾರು 32 ಪುಟಾಣಿಗಳು ಭಾಗವಹಿಸಿದ್ದರು.

ಪ್ರಥಮ ಬಹುಮಾನವನ್ನು ಆರುಷ್ ಎಸ್. ಖಂಡಿಗ, ದ್ವಿತೀಯ ಬಹುಮಾನವನ್ನು ದಿಶಾನಿ ಎಚ್.ಅಶ್ವತ ಪಳಿಕೆ ಪಡೆದುಕೊಂಡರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಪುಟಾಣಿಗಳಿಗೆ ನಗದು ಬಹುಮಾನ ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು.

Exit mobile version