Site icon Suddi Belthangady

ಪೆರೋಡಿತ್ತಾಯಕಟ್ಟೆ ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ

ತೆಂಕಕಾರಂದೂರು: ಪೆರೋಡಿತಾಯಕಟ್ಟೆ ಸ.ಉ.ಹಿ.ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಆ.25ರಂದು ಪೆರೋಡಿತ್ತಾಯಕಟ್ಟೆ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಜರಗಿತು.ವೇದಿಕೆಯಲ್ಲಿ ಅಧ್ಯಕ್ಷ ಸತೀಶ್ ಶೆಟ್ಟಿ ಅಲಿಮಾರ್, ವಾರ್ಷಿಕೋತ್ಸವ ಸಮಿತಿ ಗೌರವ ಅಧ್ಯಕ್ಷ ಸಂತೋಷ್ ಹೆಗ್ಡೆ, ಕಾರ್ಯದರ್ಶಿ ಪ್ರಮೋಧರ ಗಿಂಡಾಡಿ, ಕೋಶಾಧಿಕಾರಿ ಶರೀಫ್ ಮಂಜೊಟ್ಟಿ, ಗೌರವ ಸಲಹೆಗಾರ ವಿಷ್ಣು ಸಂಪಿಗೆತ್ತಾಯ ಉಪಸ್ಥಿತರಿದ್ದರು.

ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ನೇಸರ, ಉಪಾಧ್ಯಕ್ಷರಾಗಿ ಸಂಶುದ್ದೀನ್ ಕಟ್ಟೆ, ಶರತ್ ಕಾಡಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ನೂಜಿ, ಜೊತೆ ಕಾರ್ಯದರ್ಶಿಗಳಾಗಿ ವಿಠಲ ಕಟ್ಟೆ,ಕೋಶಾಧಿಕಾರಿಯಾಗಿ ಶರೀಫ್ ಮಂಜೂಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶೇಷಾಚಲ ಭಟ್, ಗೌತಮ್ ಗಿಂಡಾಡಿ, ಸುಲೇಮಾನ್ ಗಿಂಡಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಜಯಂತ ಓಡದಕರಿಯ, ಜಯಪ್ರಕಾಶ್, ಸುರೇಖ ಶೆಟ್ಟಿ, ಸಿರಾಜ್ ಮಂಜೊಟ್ಟಿ, ಪ್ರಮೋದ್ ಮಿಲ್ ಬಳಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರಮೋಧರ ಗಿಂಡಾಡಿ, ಸುಜಿತ್ ಕಾಡಬಾಗಿಲು, ಪ್ರಕಾಶ್ ಕುಕ್ಕೆಟ್ಟು, ಗೌರವ ಸಲಹೆಗಾರರಾಗಿ ಸಂತೋಷ್ ಹೆಗ್ಡೆ, ಸತೀಶ್ ಶೆಟ್ಟಿ ಅಳಿಮಾರ್, ಅಶ್ರಫ್ ಕಟ್ಟೆ, ನಿಜಾಮ್ ಗಿಂಡಾಡಿ, ಕೆ.ವಿಷ್ಣು ಸಂಪಿಗೆತ್ತಾಯ, ರಮನಾಥ ರೈ, ಸಾಂತಪ್ಪ ಮೂಲ್ಯ, ಹೇಮಂತ್ ಗುಂಡೇರಿ, ಶಾಲಾ ಮುಖ್ಯೋಪಾಧ್ಯಾಯರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯಿನಿ ಬೆನ್ನಿ ಪಾಯ್ಸ್, ಶಿಕ್ಷಕಿ ಜ್ಯೋತಿ, ಶಾಲಾ ಎಸ್.ಎಂ.ಡಿ.ಸಿ ಅಧ್ಯಕ್ಷ ಮುಸ್ತಫಾ ಮಂಜೊಟ್ಟಿ, ಹಳೇ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.

Exit mobile version