Site icon Suddi Belthangady

ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ನವ ನಕ್ಷತ್ರ ಸನ್ಮಾನ-2024 ಪ್ರಶಸ್ತಿ ಪುರಸ್ಕಾರ

ಉಜಿರೆ: ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಆ.24ರಂದು ರಾತ್ರಿ ನಡೆದ ಟಿವಿ9 ಸುದ್ದಿ ವಾಹಿನಿಯ ಹದಿನೇಳನೆ ವಾರ್ಷಿಕ ಸಂಭ್ರಮಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಅನುಪಮ ಸೇವೆಗಾಗಿ “ನವನಕ್ಷತ್ರ ಸನ್ಮಾನ – 2024” ಪ್ರಶಸ್ತಿ ಪ್ರದಾನ ಗೌರವಿಸಿದರು.

ಟಿವಿ9 ವಾಹಿನಿಯ ದಕ್ಷಿಣ ಭಾರತದ ಮಾರ್ಕೆಟಿಂಗ್ ಮುಖ್ಯಸ್ಥ ವಿಕ್ರಂ ಮತ್ತು ಕರ್ನಾಟಕ ರಾಜ್ಯದ ಮುಖ್ಯಸ್ಥ ರಾಹುಲ್‌ ಚೌಧರಿ ಮುಂತಾದವರು ಉಪಸ್ಥಿತರಿದ್ದರು.

Exit mobile version