Site icon Suddi Belthangady

ಕೊಕ್ಕಡ -ಗೊಳಿತೊಟ್ಟು ಭಾಗದಲ್ಲಿ ಭಯಾನಕ ಬಿರುಗಾಳಿ -ಬೀಸಿದ ರಭಸಕ್ಕೆ ಹಲವಾರು ಮನೆಯ ಮಾಡು ಮತ್ತು ತೋಟದ ಅಡಿಕೆ ಗಿಡಗಳು ನಾಶ

ಕೊಕ್ಕಡ : ಆ.25ರಂದು ನೆಲ್ಯಾಡಿ ಸಮೀಪದ ಗೊಳಿತೊಟ್ಟು ಭಾಗದ ಕೊಡಿಂಗೇರಿ ಎಂಬಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರಾರಂಭವಾದ ಬಿರುಗಾಳಿ ಅಲ್ಲಿರುವ ಅನೇಕ ಮನೆ ತೋಟಗಳಿಗೆ ನುಗ್ಗಿ ಕೊಕ್ಕಡ ಭಾಗದ ಫಿಜಿನಡ್ಕ ಮುಂತಾದ ಕಡೆಯಲ್ಲಿ ಆವರಿಸಿ ಅಲ್ಲಿಯ ಅಣ್ಣುಗೌಡ, ಶಶಿ, ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯರಾದ ಲತಾ ರವರ ಅಡಿಕೆ ತೋಟದಲ್ಲೂ 30ಕ್ಕಿಂತ ಹೆಚ್ಚು ಅಡಿಕೆ ಮರ ನಾಶವಾಗಿದೆ. ಇನ್ನೂ ಹಲವಾರು ಮನೆ ಮತ್ತು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.

Exit mobile version